ಮೈದಾನದಲ್ಲೇ ಕಿಚ್ಚ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆದ ಮಲಯಾಳಂ ನಟ

ಭಾನುವಾರ, 26 ಫೆಬ್ರವರಿ 2023 (17:15 IST)
Photo Courtesy: Twitter
ಜೈಪುರ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ಕೇರಳ ಸ್ಟ್ರೈಕರ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಪಂದ್ಯ ನಡುವೆ ಕೇರಳ ಆಟಗಾರ ಕಿಚ್ಚ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆದಿದ್ದು ಎಲ್ಲರ ಗಮನ ಸೆಳೆದಿದೆ.

ಕೇರಳ ಸ್ಟ್ರೈಕರ್ಸ್ ತಂಡದ ಆಟಗಾರ, ನಟ ಮಣಿಕ್ಕುಟ್ಟನ್ ಬ್ಯಾಟಿಂಗ್ ಮಾಡಲು ಕ್ರೀಸ್ ಗೆ ಬಂದಾಗ ಕಿಚ್ಚ ಸುದೀಪ್ ಕೈ ಕುಲುಕಿದರು. ಆದರೆ ಮಣಿಕ್ಕುಟ್ಟನ್ ನೇರವಾಗಿ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆಯುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ