ಸಿನಿಮಾದವರಿಗೆ ಲಸಿಕೆ ನೀಡಿ: ವಾಣಿಜ್ಯ ಮಂಡಳಿಯಿಂದ ಆರೋಗ್ಯ ಸಚಿವರಿಗೆ ಮನವಿ

ಮಂಗಳವಾರ, 18 ಮೇ 2021 (12:24 IST)
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಕೊರೋನಾ ಲಸಿಕೆ ನೀಡಿ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಆರೋಗ್ಯ ಸಚಿವ ಡಾ. ಸುಧಾಕರ್ ಗೆ ಮನವಿ ಸಲ್ಲಿಸಿದೆ.


ಹಿರಿಯ ನಿರ್ಮಾಪಕ ಸಾರಾ ಗೋವಿಂದು, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ನಾಗಣ್ಣ ಸೇರಿದಂತೆ ವಿವಿಧ ಪದಾದಿಕಾರಿಗಳು ಆರೋಗ್ಯ ಸಚಿವರನ್ನು ಭೇಟಿಯಾಗಿ ಲಿಖಿತ ಮುಖೇನ ಮನವಿ ಸಲ್ಲಿಸಿದ್ದಾರೆ.

ಚಿತ್ರರಂಗದ ಕೆಲವು ಮಂದಿಗೆ ಮಾತ್ರ ಕೊರೋನಾ ಲಸಿಕೆಯಾಗಿದೆ. ಎಲ್ಲರೂ ಲಸಿಕೆ ಪಡೆದುಕೊಂಡರೆ ಸುರಕ್ಷಿತವಾಗಿ ಶೂಟಿಂಗ್ ಮಾಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ