ಹೊರಟೇ ಹೋದೆಯಲ್ಲಾ ವಿಜಯ್: ಕಿಚ್ಚ ಸುದೀಪ್ ಕಂಬನಿ

ಸೋಮವಾರ, 14 ಜೂನ್ 2021 (13:00 IST)
ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಸಾವಿಗೆ ನಟ ಕಿಚ್ಚ ಸುದೀಪ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ವಿಜಯ್ ಗೆ ಅಪಘಾತವಾದ ತಕ್ಷಣ ಅವರಿಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸುದೀಪ್ ನೆರವಾಗಿದ್ದರು. ಇದೀಗ ಸುದೀಪ್ ತೀವ್ರ ನೊಂದು ಟ್ವೀಟ್ ಮಾಡಿದ್ದಾರೆ.

ಮೆದುಳು ನಿಷ್ಕ್ರಿಯವಾಗಿ ಇಹಲೋಕ ತ್ಯಜಿಸಿದ ವಿಜಯ್ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ‘ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾನೆಂದು ತಿಳಿದು ತುಂಬಾನೇ ಬೇಸರವಾಗಿದೆ. ಲಾಕ್ ಡೌನ್ ಗಿಂತ ಕೆಲವೇ ದಿನ ಮೊದಲು ಎರಡೆರಡು ಬಾರಿ ಅವನನ್ನು ಭೇಟಿಯಾಗಿದ್ದೆ. ರಿಲೀಸ್ ಆಗಬೇಕಿರುವ ತನ್ನ ಮುಂದಿನ ಸಿನಿಮಾ ಬಗ್ಗೆ ಭಾರೀ ಆಶಾವಾದಿಯಾಗಿ ಮಾತನಾಡಿದ್ದ. ತುಂಬಾ ಬೇಸರವಾಗುತ್ತಿದೆ. ಅವನ ಕುಟುಂಬಸ್ಥರು, ಸ್ನೇಹಿತರಿಗೆ ಸಂತಾಪಗಳು’ ಎಂದು ಭಾವುಕರಾಗಿ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ