ಹುಚ್ಚ ವೆಂಕಟ್ ಗೆ ನೆರವಾಗಲಿರುವ ಕಿಚ್ಚ ಸುದೀಪ್ ಅಭಿಮಾನಿಗಳು

ಮಂಗಳವಾರ, 16 ಜೂನ್ 2020 (09:17 IST)
ಬೆಂಗಳೂರು: ಮೊನ್ನೆಯಷ್ಟೇ ಶ್ರೀರಂಗಪಟ್ಟಣದಲ್ಲಿ ಹಲ್ಲೆಗೊಳಗಾದ ನಟ ಹುಚ್ಚ ವೆಂಕಟ್ ನೆರವಿಗೆ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಸೊಸೈಟಿ ಮುಂದಾಗಲಿದೆ.

 

ಹುಚ್ಚ ವೆಂಕಟ್ ಮಾನಸಿಕ ಪರಿಸ್ಥಿತಿ ಸರಿ ಇಲ್ಲ.  ಹೀಗಾಗಿ ಆಗಾಗ ಏನಾದರೂ ಎಡವಟ್ಟು ಮಾಡುತ್ತಿರುತ್ತಾರೆ. ಅವರ ಪರಿಸ್ಥಿತಿ ಬಗ್ಗೆ ಗೊತ್ತಿದ್ದೂ ಅವರ ಮೇಲೆ ಹಲ್ಲೆ ನಡೆಸುವ ಜನರ ಮನಸ್ಥಿತಿ ಇನ್ನೂ ಕ್ರೂರ.  ಹಿಂದೊಮ್ಮೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್ ಆಗಾಗ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿರುತ್ತಾರೆ.

ಹೀಗಿರುವಾಗ ಬೀದಿ ಬೀದಿಯಲ್ಲಿ ಗೊತ್ತು ಗುರಿಯಿಲ್ಲದೇ ಅಲೆಯುತ್ತಿರುವ ಹುಚ್ಚ ವೆಂಕಟ್ ರನ್ನು ಎಲ್ಲೇ ಕಂಡರೂ ನಮಗೆ ತಿಳಿಸಿ. ಕಿಚ್ಚ ಸುದೀಪ್ ನಮಗೆ ಅವರ ಹೊಣೆ ಹೊತ್ತುಕೊಳ್ಳಲು ಜವಾಬ್ಧಾರಿ ನೀಡಿದ್ದಾರೆ ಎಂದು ಚ್ಯಾರಿಟೇಬಲ್ ಸಂಸ್ಥೆ ಹೇಳಿದೆ. ಹುಚ್ಚ ವೆಂಕಟ್ ರ ಸಂಪೂರ್ಣ ಜವಾಬ್ಧಾರಿ ತೆಗೆದುಕೊಳ್ಳಲಿದೆ ಈ ಸಂಸ್ಥೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ