ರಾಯಚೂರಿನಲ್ಲಿ ಕಿಚ್ಚ ಸುದೀಪ್ ಗೆ ಅಭಿಮಾನಿಗಳ ಮುತ್ತಿಗೆ

ಬುಧವಾರ, 27 ಏಪ್ರಿಲ್ 2022 (17:27 IST)
ರಾಯಚೂರು: ಮಹರ್ಷಿ ವಾಲ್ಮೀಕಿ ಮತ್ತು ವೀರ ಮದಕರಿ ನಾಯಕರ ಪ್ರತಿಮೆ ಅನಾವರಣಕ್ಕೆ ರಾಯಚೂರಿಗೆ ಬಂದಿಳಿದ ಕಿಚ್ಚ ಸುದೀಪ್ ಗೆ ಅಭಿಮಾನಿಗಳು ಪ್ರೀತಿಯಿಂದ ಮುತ್ತಿಗೆ ಹಾಕಿ ಜೈಕಾರ ಕೂಗಿದ್ದಾರೆ.

ಹೆಲಿಕಾಪ್ಟರ್ ಮೂಲಕ ಕಿಚ್ಚ ಸುದೀಪ್ ಬಂದಿಳಿಯುತ್ತಿದ್ದಂತೇ ರಾಯಚೂರಿನ ಮಂದಿ ಪ್ರೀತಿಯಿಂದ ಜೈಕಾರ ಹಾಕಿದ್ದಾರೆ. ಬಳಿಕ ವೇದಿಕೆ ಮೇಲೆ ಕಿಚ್ಚನ ಆಗಮನವಾಗುತ್ತಿದ್ದಂತೇ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಇಲ್ಲಿನ ಅಭಿಮಾನಿಗಳ ಪ್ರೀತಿಗೆ ಉರಿಬಿಸಿಲನ್ನೂ ಲೆಕ್ಕಿಸದೇ ಸುದೀಪ್ ಮೈಕ್ ಮುಂದೆ ಮಾತನಾಡಿ ಧನ್ಯವಾದ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ