ಕೊಡಗಿನಲ್ಲಿ ಆಸ್ಪತ್ರೆ ಕಟ್ಟಲು ನೆರವಿನ ಭರವಸೆ ನೀಡಿದ ಕಿಚ್ಚ ಸುದೀಪ್

ಶನಿವಾರ, 15 ಜೂನ್ 2019 (09:53 IST)
ಬೆಂಗಳೂರು: ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಯೊಂದನ್ನು ಕಟ್ಟಲು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಕೊಡಗು ಜನ ಅಭಿಯಾನವನ್ನೇ ಶುರುಮಾಡಿಕೊಂಡಿದ್ದಾರೆ.


ಕೊಡಗಿಗೆ ಎಮರ್ಜೆನ್ಸಿ ಆಸ್ಪತ್ರೆ ಬೇಕಾಗಿದೆ ಎಂಬ ಅಭಿಯಾನಕ್ಕೆ ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಕೂಡಾ ಕೈ ಜೋಡಿಸಿದ್ದು, ಸಿಎಂ ಕುಮಾರಸ್ವಾಮಿಗೂ ಮನವಿ ಮಾಡಿದ್ದಾರೆ.

ಈಗ ಕಿಚ್ಚ ಸುದೀಪ್ ಕೂಡಾ ಈ ಅಭಿಯಾನಕ್ಕೆ ಧ್ವನಿಗೂಡಿಸಿದ್ದಾರೆ. ಕೊಡಗಿನ ಜನರ ಜತೆಗೆ ನಾನು ಯಾವಾಗಲೂ ಇದ್ದೇನೆ. ನನ್ನಿಂದ ಸಾಧ್ಯವಾದ ಎಲ್ಲಾ ಸಹಾಯ ಮಾಡುವೆ. ಕೊಡಗಿನ ಜನರಿಗೆ ನನ್ನ ಬೆಂಬಲವಿದೆ ಎಂದು ಕಿಚ್ಚ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ