ಅತ್ಯಾಚಾರ ಮಾಡಕ್ಕೂ ಯೋಚನೆ ಮಾಡ್ಬೇಕು! ಅಂತ ಕಾನೂನು ಬರಲಿ ಎಂದು ಕಿಚ್ಚ ಸುದೀಪ್

ಮಂಗಳವಾರ, 3 ಡಿಸೆಂಬರ್ 2019 (11:21 IST)
ಬೆಂಗಳೂರು: ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿರುವ ನಟ ಕಿಚ್ಚ ಸುದೀಪ್ ಈ ಬಗ್ಗೆ ಕಠಿಣ ಕಾನೂನೊಂದು ಜಾರಿಗೆ ಬರಬೇಕು ಎಂದಿದ್ದಾರೆ.


ಇಂತಹ ಘಟನೆಗಳು ಯಾರಿಗೇ ಆದರೂ ನೋವು ತರುತ್ತದೆ. ಇಂತಹ ಘಟನೆಗಳು ನಡೆಯಲೇಬಾರದು ಎಂದ ಕಿಚ್ಚ ಇವುಗಳನ್ನು ತಡೆಯಲು ಕಠಿಣ ಕಾನೂನು ರೂಪಿಸಬೇಕು ಎಂದಿದ್ದಾರೆ.

‘ಇನ್ಮುಂದೆ ಅತ್ಯಾಚಾರ ಮಾಡಲು ಅಲ್ಲ, ಯೋಚನೆ ಮಾಡಲೂ ಕೂಡಾ ಹೆದರುವಂತಹ ಕಾನೂನ ಜಾರಿಗೆ ಬರಬೇಕು. ಅಂತಹ ಕಾನೂನು ತರುತ್ತಾರೆ ಎಂಬ ನಂಬಿಕೆ ನನ್ನದು’ ಎಂದು ಕಿಚ್ಚ ಮಾಧ‍್ಯಮಗಳ ಮುಂದೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ