ನಿಖಿಲ್ ಕುಮಾರಸ್ವಾಮಿ ನೋಡಿ ಕಿಚ್ಚ ಸುದೀಪ್ ಹೊಗಳಿದ್ದೇ ಹೊಗಳಿದ್ದು!

ಮಂಗಳವಾರ, 29 ಜನವರಿ 2019 (09:29 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸೀತಾರಾಮ ಕಲ್ಯಾಣ ಚಿತ್ರ ವೀಕ್ಷಿಸಿ ಕಿಚ್ಚ ಸುದೀಪ್ ಹೊಗಳಿಕೆಯ ಸುರಿಮಳೆಗೈದಿದ್ದಾರೆ.


ಸೀತಾರಾಮ ಕಲ್ಯಾಣ ವೀಕ್ಷಿಸಿದ ಸುದೀಪ್ ನಿಖಿಲ್ ಕುಮಾರಸ್ವಾಮಿ ನಟನೆ ಬಗ್ಗೆ ಭರ್ಜರಿ ಹೊಗಳಿಕೆ ನೀಡಿದ್ದಾರೆ. ಇವರು ಖಂಡಿತಾ ಭರವಸೆಯ ನಟ ಎಂದು ಕಿಚ್ಚ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ನಿಖಿಲ್ ಪರ್ಫಾರ್ಮೆನ್ಸ್ ನಂಗೆ ಇಷ್ಟವಾಯಿತು. ಮತ್ತು ದೃಶ್ಯಗಳಿಗೆ ತಕ್ಕ ಹಾಗೆ ಅವರು ಹೇಗೆ ಅಭಿನಯಸಿಬೇಕಿತ್ತೋ ಹಾಗೇ ಅಭಿನಯಿಸಿದ್ದಾರೆ. ಜನರಿಗೆ ಇನ್ನಷ್ಟು ಹತ್ತಿರವಾಗಲು ನಿಖಿಲ್ ಇನ್ನಷ್ಟು ಸರಳ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಿಕೊಂಡು ನಟಿಸುವುದನ್ನು ನೋಡಲು ಬಯಸುತ್ತೇನೆ ಎಂದು ಕಿಚ್ಚ ಸುದೀಪ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ