ಶಿವಣ್ಣ ಅಂದು ಮಾಡಿದ್ದ ಸಹಾಯಕ್ಕೆ ಇಂದು ಋಣ ತೀರಿಸಿದ ಕಿಚ್ಚ ಸುದೀಪ್!

ಭಾನುವಾರ, 17 ಮಾರ್ಚ್ 2019 (09:11 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಕವಚ ಸಿನಿಮಾದ ಅಡಿಯೋ ರಿಲೀಸ್ ಆಗಿದೆ. ಇದನ್ನು ಮಾಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.


ಆ ಮೂಲಕ ಕಿಚ್ಚ ಸುದೀಪ್ ಶಿವಣ್ಣ ಅಂದು ತಮಗೆ ಮಾಡಿದ್ದ ಸಹಾಯದ ಋಣ ತೀರಿಸಿದ್ದಾರೆ. ಅಷ್ಟಕ್ಕೂ ಆವತ್ತು ಶಿವಣ್ಣ, ಸುದೀಪ್ ಗೆ ಏನು ಸಹಾಯ ಮಾಡಿದರು?

ಸುದೀಪ್ ನಾಯಕನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ‘ಸ್ಪರ್ಶ’. ಈ ಸಿನಿಮಾದ ಅಡಿಯೋ ಬಿಡುಗಡೆ ಮಾಡಿದ್ದು, ಸ್ಟಾರ್ ನಟ ಶಿವರಾಜ್ ಕುಮಾರ್. ಆ ಮೂಲಕ ಆಗ ಚಿತ್ರರಂಗಕ್ಕೆ ಹೊಸಬರಾಗಿದ್ದ ಸುದೀಪ್ ಗೆ ಪ್ರೋತ್ಸಾಹ ನೀಡಿದ್ದರು.

ಈಗ ಅದೇ ಶಿವಣ್ಣನ ಹೊಸ ಬಗೆಯ ಸಿನಿಮಾ ಅಡಿಯೋ ರಿಲೀಸ್ ಮಾಡುವ ಮೂಲಕ ಸುದೀಪ್ ಋಣ ಸಂದಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಂದಿನ ಘಟನೆಯನ್ನು ನೆನೆದು ಸುದೀಪ್, ಶಿವಣ್ಣನ ಉಪಕಾರ ಸ್ಮರಿಸಿದ್ದಾರೆ ಅಲ್ಲದೆ, ನಾನು ನಿಮ್ಮ ದೊಡ್ಡ ಫ್ಯಾನ್ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ