ಎಷ್ಟೋ ದಿನಗಳ ನಂತರ ಮೋಡಿ ಮಾಡಿದ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡು

ಶನಿವಾರ, 16 ಮಾರ್ಚ್ 2019 (09:14 IST)
ಬೆಂಗಳೂರು: ಒಂದು ಕಾಲದಲ್ಲಿ ಕನ್ನಡ ಸಿನಿಮಾದ ಹಾಡುಗಳೆಂದರೆ ಹಾಡಿದವರು ಯಾರು ಎಂದು ಕೇಳವ ಹಾಗೇ ಇರಲಿಲ್ಲ. ಆ ಮಟ್ಟಿಗೆ ಎಸ್ಪಿ ಬಾಲಸುಬ್ರಹ್ಮಣ್ಯಂ ಎಂಬ ಸ್ವರ ಮಾಂತ್ರಿಕ ಸ್ಯಾಂಡಲ್ ವುಡ್ ಸ್ಟಾರ್ ಗಳ ಧ್ವನಿಯಾಗಿದ್ದರು.


ಆದರೆ ಬಾಲಿವುಡ್ ಗಾಯಕರು, ಹೊಸ ಗಾಯಕರ ಅಲೆಯಲ್ಲಿ ಎಸ್ಪಿ ಹಾಡುಗಳು ಬರುವುದೇ ನಿಂತಿತ್ತು. ಆದರೆ ಇದೀಗ ಮತ್ತೆ ಎಸ್ಪಿಬಿ ಹಾಡೊಂದು ಮೋಡಿ ಮಾಡುತ್ತಿದೆ.

ಶಿವರಾಜ್ ಕುಮಾರ್ ಕುರುಡನ ಪಾತ್ರದಲ್ಲಿ ಅಭಿನಯಿಸಿರುವ ‘ಕವಚ’ ಸಿನಿಮಾದ ‘ರೆಕ್ಕೆಯ ಕುದರೆಯೇರಿ’ ಎಂಬ ಹಾಡು ಇದೀಗ ಬಿಡುಗಡೆಯಾಗಿದ್ದು, ಭಾರೀ ಹಿಟ್ ಆಗಿದೆ. ಸ್ವತಃ ಕಿಚ್ಚ ಸುದೀಪ್ ಕೂಡಾ ಹಾಡನ್ನು ಮೆಚ್ಚಿ, ಶಿವಣ್ಣನ ಮುಗ್ಧ ಅಭಿನಯವನ್ನೂ ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ