ಸಿಎಂಗೆ ಪತ್ರ ಬರೆದ ಕಿಚ್ಚ ಸುದೀಪ್

ಬುಧವಾರ, 9 ಆಗಸ್ಟ್ 2017 (10:43 IST)
ಬೆಂಗಳೂರು: ರಾಜ್ಯ ಸರ್ಕಾರ ಕೆರೆಗಳ ಡಿನೋಟಿಫಿಕೇಷನ್ ಮಾಡಲು ಮುಂದಾಗಿದ್ದರೆ, ಹಲವರು ಇದರ ವಿರುದ್ಧಅಭಿಯಾನ ಆರಂಭಿಸಿದ್ದಾರೆ.

 
ಕೆರೆಗಳನ್ನು ಉಳಿಸಿ ಎಂದು ಪರಿಸರವಾದಿಗಳು, ಸಂಘಟನೆಗಳ ಕೂಗಿಗೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ. ಟ್ವಿಟರ್ ನಲ್ಲಿ ಕೆರೆಗಳ ಸಂರಕ್ಷಣೆ ಮಾಡೋಣ ಎಂದು ಸಂದೇಶ ಬರೆದಿರುವ ನಟ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಈ ನಿಟ್ಟಿನಲ್ಲಿ ಪತ್ರ ಬರೆದಿದ್ದಾರೆ.

ಕೆರೆಗಳು ನಮ್ಮ ಜೀವನಾಡಿ. ನಮ್ಮ ಸಂತೃಪ್ತ ಬದುಕಿಗೆ ಕೆರೆಗಳು ಅನಿವಾರ್ಯ. ಬೆಂಗಳೂರಿನ ಎಲ್ಲಾ ಕೆರೆಗಳನ್ನು ಸಂರಕ್ಷಿಸುವ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ.. ರಾಜ್ಯಸಭೆ ಚುನಾವಣೆ ಬಿಜೆಪಿಗೆ ಅಪಾಯದ ಸೂಚನೆಯೇ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ