ಪಿ.ಅಣ್ಣಯ್ಯ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಂ.ರಾಜೇಂದ್ರಕುಮಾರ್ ಆರ್ಯ ಚಿತ್ರಕಥೆ ಬರೆದಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ,ಎ.ಕೆ.ರಿಶಾಲ್ ಸಾಯಿ ಸಂಗೀತ ನಿರ್ದೇಶನ,ಕಲೈ,ಮದನ್ - ಹರಿಣಿ ನೃತ್ಯ ನಿರ್ದೇಶನ ಹಾಗೂ ರವಿವರ್ಮ,ಉದಯ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಶ್ರೀಚರಂತ್ ಫಿಲಂಸ್ ಲಾಂಛನದಲ್ಲಿ ಶಿ.ಸಿ.ಪ್ರಸನ್ನಕುಮಾರ್ ದೊಡ್ ಬೆಲೆ ಅವರು ಆಕ್ಟೋಪಸ್ಗೆ ಹಣ ಹೂಡಿದ್ದಾರೆ.
ಆಕ್ಟೋಪಸ್ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಈ ಹಂತದಲ್ಲಿ ಒಂದು ಹಾಡು ಮತ್ತು ಮಾತಿನ ಭಾಗದ ಶೂಟಿಂಗ್ ಪೂರ್ಣವಾಗಿದೆ.ಮೊದಲ ಹಂತದ ಚಿತ್ರೀಕರಣದಲ್ಲಿ ಕಿಶೋರ್,ಯಜ್ಞಶೆಟ್ಟಿ,ಅಶ್ವಿನಿ,ತಾರಾ,ಶರತ್ ಲೋಹಿತಾಶ್ವ,ಬುಲೆಟ್ ಪ್ರಕಾಶ್,ಸಂಪತ್ ರಾಮ್ ಮುಂತಾದವರು ಭಾಗವಹಿಸಿದ್ದರು. ಇದರ ಎರಡನೇ ಹಂತದ ಚಿತ್ರೀಕರಣ ಅಕ್ಟೋಬರ್ 27 ರಿಂದ ಆರಂಭ ಆಗಲಿದೆ. ಕಿಶೋರ್ ಮತ್ತು ಯಜ್ಞ ಶೆಟ್ಟಿ ಜೊತೆಗೆ ಅಶ್ವಿನಿ, ತಾರಾ,ಅವಿನಾಶ್, ಸಂಪತ್ರಾಮ್, ಬುಲೆಟ್ ಪ್ರಕಾಶ್ ಮುಂತಾದವರು ನಟಿಸುತ್ತಿದ್ದಾರೆ.