ಆರ್ ಬಿ ಚೌಧರಿ ಪ್ರಸಿದ್ಧ ನಿರ್ಮಾಪಕರು. ಅವರು ಅನೇಕ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಓ ನನ್ನ ನಲ್ಲೆ ಮತ್ತು ಇಂದ್ರ ಚಿತ್ರಗಳನ್ನು ನಿರ್ಮಿಸಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈಗ ಬಂದಿರುವ ಸುದ್ದಿ ಏನೆಂದರೆ ಅಜಯ್ ರಾವ್ ಅವರ ನಿರ್ಮಾಣದ ಹಾಗೂ ನಟನೆಯ ಕೃಷ್ಣ ಲೀಲಾ ಚಿತ್ರದ ರೀಮೇಕ್ ಹಕ್ಕುಗಳನ್ನು ಅವರು ಪಡೆದಿದ್ದು, ಈಗ ಬೇರೆ ಭಾಷೆಗಳಲ್ಲಿ ಅದು ನಿರ್ಮಾಣವಾಗುತ್ತಿದೆ.
ಕೃಷ್ಣ ಲೀಲಾ ಚಿತ್ರವನ್ನು ನಿರ್ದೇಶನ ಮಾಡಿದ್ದು ಶಶಾಂಕ್. ಚಿತ್ರದ ರೀಮೇಕ್ ಬಗ್ಗೆ ಶಶಾಂಕ್ ಅವರು ಖುದ್ದು ಸ್ಪಷ್ಟಪಡಿಸಿದ್ದಾರೆ. ಆರ್ ಬಿ ಚೌಧರಿ ಅವರ ಪುತ್ರ ಜೀವ ತಮಿಳು ವರ್ಶನ್ ನಲ್ಲಿ ನಟಿಸುತ್ತಿದ್ದಾರೆ. ಆದರೆ ತೆಲುಗು ಭಾಷೆಯಲ್ಲಿ ಯಾರು ನಟಿಸುತ್ತಾರೆ ಎನ್ನುವುದು ಇನ್ನು ನಿರ್ಧಾರವಾಗಿಲ್ಲ. ಇತ್ತೀಚೆಗೆ ಕೃಷ್ಣ ಲೀಲಾ ಚಿತ್ರ ಬಿಡುಗಡೆ ಆಗಿತ್ತು. ಅದು ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದೆ ಎನ್ನು ಸಂಗತಿ ಎಲ್ಲರಿಗೂ ತಿಳಿದೇ ಇದೆ.