ಸ್ಯಾಂಡಲ್ ವುಡ್ ನಲ್ಲಿ ಕುರುಕ್ಷೇತ್ರ ಯುದ್ಧವೇ ನಡೆಯಲಿದೆ!

ಸೋಮವಾರ, 17 ಏಪ್ರಿಲ್ 2017 (05:26 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯದಲ್ಲೇ ಕುರುಕ್ಷೇತ್ರ ಕಾಳಗ ನಡೆಯಲಿದೆ! ಹಾಗಂತ ಗಾಬರಿಯಾಗಬೇಕಿಲ್ಲ. ಇದು ಯಾವುದೇ ಸ್ಟಾರ್  ವಾರ್ ನ ಸೂಚನೆಯಲ್ಲ.

 
‘ಕುರುಕ್ಷೇತ್ರ ಹೆಸರಿನ ಸಿನಿಮಾವೊಂದು ಏಪ್ರಿಲ್ 23 ರಂದು ಸೆಟ್ಟೇರಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂಬ  ಐತಿಹಾಸಿಕ ಸಿನಿಮಾ ಮಾಡಿದ್ದ ದರ್ಶನ್ ಗೆ ಇದು ಹೊಸ ಚಾಲೆಂಜ್.

ಅಂದ ಹಾಗೆ ದರ್ಶನ್ ಗೆ ಇದರಲ್ಲಿ ದುರ್ಯೋಧನನ ಪಾತ್ರವಂತೆ. ನಿರ್ಮಾಪಕ ಮುನಿರತ್ನ ಈ ಚಿತ್ರಕ್ಕಾಗಿ ಕನ್ನಡ ಚಿತ್ರರಂಗದ ಘಟಾನುಘಟಿ ನಾಯಕರನ್ನೆಲ್ಲಾ ಒಂದುಗೂಡಿಸುವ ಪ್ರಯತ್ನದಲ್ಲಿದ್ದಾರಂತೆ. ಹಾಗಾಗಿ ಕುರುಕ್ಷೇತ್ರದಲ್ಲಿ ಮುಂದೇನಾಗುತ್ತದೆ ಎಂದು ನೋಡಲು ನಾವೂ ನೀವೂ ಕಾಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ