ಕುರುಕ್ಷೇತ್ರಕ್ಕಾಗಿ ಮೀಸೆಬೋಳಿಸಲು ಸಜ್ಜಾದ ಕ್ರೇಜಿಸ್ಟಾರ್

ಮಂಗಳವಾರ, 23 ಮೇ 2017 (15:35 IST)
ಬೆಂಗಳೂರು:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರವೊಂದರ ನಟನೆಗಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮೀಸೆ ಬೋಳಿಸಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಹರಿದಾಡತೊಡಗಿದೆ. ಈ ಮೂಲಕ ರವಿಚಂದ್ರನ್ ಹೊಸ ಲುಕ್ ನಲ್ಲಿ ಪ್ರೇಕ್ಷರನ್ನು ಸೆಳೆಯಲಿದ್ದಾರೆ.
 
ಮುನಿರತ್ನ ನಿರ್ಮಾಣದ ’ಕುರುಕ್ಷೇತ್ರ’ ಚಿತ್ರ ಸೆಟ್ಟೇರುವ ಮುನ್ನವೇ ಭಾರೀ ಸುದ್ದಿಯಾಗುತ್ತಿದೆ. ದರ್ಶನ್ ಅವರ 50ನೇ ಚಿತ್ರ ಇದಾಗಿದ್ದು ಪೌರಾಣಿಕ ಕಥೆಯ ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಿದರೆ ಕಿಚ್ಚ ಸುದೀಪ್ ಕರ್ಣನಾಗಿ ನಟಿಸಲಿದ್ದಾರಂತೆ. ಕುರುಕ್ಷೇತ್ರ ಬಹುತಾರಾಗಣದ ಅದ್ಧೂರಿ ಚಿತ್ರವಾಗಿದೆ.
 
ಈ ಚಿತ್ರದಲ್ಲಿ ರವಿಚಂದ್ರನ್ ಅಭಿನಯಿಸುತ್ತಿದ್ದು, ಕ್ರೆಜಿಸ್ಟಾರ್ ಕೃಷ್ಣನಾಗಿ ಅಭಿನಯಿಸಲಿದ್ದಾರೆ. ಕೃಷ್ಣ ಪಾತ್ರಕ್ಕಾಗಿ ರವಿಚಮ್ದ್ರನ್ ಮೀಸೆ ತೆಗೆಯಬೇಕಿದೆ. ರವಿಚಂದ್ರನ್ ಅವರು ಮೀಸೆ ತೆಗೆಯಲು ಒಪ್ಪುತಾರೆಯೇ ಎಂಬ ಅನುಮಾನ ಚಿತ್ರತಂಡಕ್ಕಿತ್ತಂತೆ. ಅದರೀಗ ರವಿಚಂದ್ರನ್ ಒಪ್ಪಿರುವುದರಿಂದ ಚಿತ್ರತಂಡದ ಚಿಂತೆ ದೂರವಾಗಿದೆ.
 

ವೆಬ್ದುನಿಯಾವನ್ನು ಓದಿ