ದುನಿಯಾ ವಿಜಯ್ ಸಹಚರನ ಬಗ್ಗೆ ಲಕ್ಷ್ಮೀ ಬಾರಮ್ಮ ಚಂದು ಹೇಳಿದ್ದೇನು ಗೊತ್ತಾ?

ಸೋಮವಾರ, 24 ಸೆಪ್ಟಂಬರ್ 2018 (09:47 IST)
ಬೆಂಗಳೂರು: ದುನಿಯಾ ವಿಜಯ್ ಮತ್ತು ಸಹಚರರು ಮಾರುತಿ ಗೌಡ ಎಂಬವರ ಮೇಲೆ  ಕಿಡ್ನ್ಯಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಚಂದು ಪ್ರತಿಕ್ರಿಯಿಸಿದ್ದಾರೆ.

ದುನಿಯಾ ವಿಜಯ್ ಸಹಚರ ಪ್ರಸಾದ್ ಹೆಸರು ಈ ಘಟನೆಯಲ್ಲಿ ಪ್ರಮುಖವಾಗಿ ಕೇಳಿಬಂದಿತ್ತು. ಪ್ರಸಾದ್ ಸ್ನೇಹಿತರೂ ಆಗಿರುವ ಚಂದು ಈ ಪ್ರಕರಣದಲ್ಲಿ ಪ್ರಸಾದ್ ಪಾತ್ರವಿಲ್ಲ. ನಿಜವಾಗಿ ಪ್ರಸಾದ್ ಜಗಳ ಬಿಡಿಸಕ್ಕೆ ಹೋಗಿದ್ದರು. ಆತ ತುಂಬಾ ಭಾವುಕ ವ್ಯಕ್ತಿ. ಹೀಗೆಲ್ಲಾ ಹಲ್ಲೆ ನಡೆಸಿರುವ ಸಾಧ್ಯತೆಯೇ ಇಲ್ಲ. ತನಿಖೆಯ ಬಳಿಕ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.

ದುನಿಯಾ ವಿಜಯ್ ಮತ್ತು ಪ್ರಸಾದ್ ಜತೆಗೆ ತಾನು ಮಾತನಾಡಿದ್ದೇನೆ. ನಾನು ಯಾರಿಗೂ ಹೊಡೆದಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ ಎಂದು ಚಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ