ವಿನೋದ್ ಮೆಹತ ಅವರ ಪುಸ್ತಕ ಅನೇಕ ವಿಶೇಷ ಸಂಗತಿಗಳನ್ನು ಹೊಂದಿದೆ ಎನ್ನುವ ಮಾತನ್ನು ನಿರ್ದೇಶಕ ಹನ್ಸಲ್ ಹೇಳಿದ್ದಾರೆ. ಸಂಜಯ್ ಗಾಂಧಿ ಅವರ ಬದುಕಲ್ಲಿ ಅವರು ತುರ್ತು ಪರಿಸ್ಥಿತಿಯಲ್ಲಿ ಕೈಗೊಂಡ ನಿರ್ಧಾರಗಳು. ಅವರ ತಾಯಿ ಇಂದಿರಾಗಾಂಧಿ ನಡುವಿನ ಬಾಂಧವ್ಯ ಎಲ್ಲದರ ಬಗ್ಗೆ ಈ ಪುಸ್ತಕದಲ್ಲಿ ತಿಳಿಸಲಾಗಿದ್ದು, ಈಗ ಅದು ಹನ್ಸಲ್ ಅವರ ನಿರ್ದೇಶನದಲ್ಲಿ ಚಿತ್ರರೂಪದಲ್ಲಿ ಬರಲಿದೆ. ಈ ಚಿತ್ರದ ಶೀರ್ಷಿಕೆ ಇನ್ನು ನಿಕ್ಕಿಯಾಗಿಲ್ಲ. ಆದರೆ ಇದು ಮುಂದಿನ ವರ್ಷ ಕೆಲಸ ಆರಂಭ ಮಾಡುತ್ತದೆ. ಇದರಲ್ಲಿ ಕಂಗನ ಮತ್ತು ಸಿಮ್ರಾನ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ.