ಇತ್ತೀಚೆಗೆ ಕಿಚ್ಚ ಸುದೀಪ್ ಕಡೆಯಿಂದ ನಟಿ ಶ್ವೇತ ಪಂಡಿತ್ ಗೆ ಒಂದು ಪತ್ರ ಬಂತು. ಅದು ಎಲ್ಲರು ತಿಳಿದಿರುವಂತೆ ಪ್ರೇಮ ಪತ್ರ ಅಲ್ಲವೇ ಅಲ್ಲ . ಈ ಮುದ್ದಾದ ನಟಿಗೆ ಸುದೀಪ್ ಥ್ಯಾಂಕ್ಸ್ ಲೆಟರ್ ಕೊಟ್ಟಿದ್ದಾರೆ . ತಮ್ಮ ಚಿತ್ರ ಮಾಣಿಕ್ಯದಲ್ಲಿ ಈ ಚೆಲುವೆ ನಟಿಸಿದ್ದಕ್ಕೆಧನ್ಯವಾದ ಅರ್ಪಿಸಿ ಒಂದು ಪತ್ರ ನೀಡಿದ್ದಾರೆ. ಅಲ್ಲದೆ ಒಂದು ಡಬ್ಬ ತುಂಬಾ ಸಿಹಿ ಸಹ ಕಳುಹಿಸಿ ಕೊಟ್ಟಿದ್ದಾರೆ ಕಿಚ್ಚ.
ಅದೂ ಅತ್ಯಂತ ಪ್ರಸಿದ್ಧ ಶ್ರೀ ಕೃಷ್ಣ ಸ್ವೀಟ್ಸ್. ಬಿಗ್ ಬಾಸ್ ನಲ್ಲಿ ಈಕೆಯೂ ಸಹ ಸ್ಪರ್ಧಿ ಆಗಿದ್ದಳು. ತಿಲಕ್ ,ಚಂದ್ರಿಕಾ ಮತ್ತು ಶ್ವೇತ ಒಂದು ಗುಂಪಾಗಿ ಆ ಕಾರ್ಯಕ್ರಮದಲ್ಲಿ ಗುರುತಿಸಿ ಕೊಂಡಿದ್ದರು. ಅದರಲ್ಲೂ ತಿಲಕ್ ಮತ್ತು ಶ್ವೇತ ನಡುವಿನ ಬಾಂಧವ್ಯ ಹೆಚ್ಚು ಗಮನ ಸೆಳೆದಿತ್ತು. ಅತಿ ಹೆಚ್ಚು ವೀಕ್ಷಕರು ಅವರಿಬ್ಬರ ಬಗ್ಗೆ ವಿಶೇಷ ಆಸ್ಥೆ ವಹಿಸಿ ವೀಕ್ಷಿಸುತ್ತಿದ್ದರು. ಇದಾದ ಬಳಿಕ ಶ್ವೇತ ಅನೇಕ ಚಿತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು ಕಿಚ್ಚ ಅವರ ಬಹು ನಿರೀಕ್ಷಿತ ಚಿತ್ರ ಮಾಣಿಕ್ಯದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕೆ ತುಂಬಾ ಖುಷಿ ಪಟ್ಟಿದ್ದಾಳೆ. ಅಲ್ಲದೆ ಸುದೀಪ್ ಅವರ ವರ್ತನೆಯು ಸಹ ಆಕೆಯಲ್ಲಿ ತುಂಬಾ ಆನಂದ ಉಂಟು ಮಾಡಿದೆ. ಅದಕ್ಕಾಗಿ ಆಕೆ ತನ್ನ ಧನ್ಯವಾದವನ್ನು ಟ್ವಿಟ್ಟರ್ ಮೂಲಕ ವ್ಯಕ್ತ ಪಡಿಸಿ.ನನ್ನ ಬದುಕಿನ ಅತ್ಯಂತ ಸಂತಸದ ದಿನ ಎಂದು ಆಕೆ ಹೇಳಿದ್ದಾಳೆ.