ನಾಯಕಿ ಮಾಲಾಶ್ರೀ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮತ್ತೆ ಗಂಗಾ ಚಿತ್ರದ ಮೂಲಕ ಒಂದಾಗಿದ್ದಾರೆ. 1990ರ ದಶಕದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಹೆಸರಾಗಿದ್ದ ಇವರು ಈಗ ಮತ್ತೆ ತಮ್ಮ ಛಾಪು ತೋರಲು ಸಿದ್ಧರಾಗಿದ್ದಾರೆ. ಅಂದರೆ ಸರಿಸುಮಾರು 16 ವರ್ಷಗಳ ನಂತರ ಇವರಿಬ್ಬರೂ ಜೊತೆಯಾಗಿ ಸೇರಿದ್ದಾರೆ. ಇದರ ಫಲವೆಂಬಂತೆ ಗಂಗಾ ಸಿನಿಮಾ ಸಂಪೂರ್ಣಗೊಂಡಿದ್ದು ಶೀಘ್ರದಲ್ಲೆ ತೆರೆಗೆ ಬರಲು ತಯಾರಾಗಿದೆ.
ಅರ್ಜುನ್ ಜನ್ಯ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ, ರಾಜೇಶ್ ಕಟ್ಟ ಚಿತ್ರದ ಛಾಯಾಗ್ರಾಹಕರು. ಅನಿಲ್ ಕುಮಾರ್ ಅವರು ಸಂಭಾಷಣೆ ಬರೆದಿದ್ದಾರೆ. ಶ್ರೀನಿವಾಸಮೂರ್ತಿ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧು ಕೋಕಿಲ, ಎಂ.ಎನ್.ಲಕ್ಷ್ಮೀದೇವಿ, ಪವಿತ್ರ ಲೋಕೇಶ್, ಶರತ್ ಲೋಹಿತಾಶ್ವ, ಹೇಮಾ ಚೌಧರಿ ಸೇರಿದಂತೆ ಹಲವರು ಗಂಗಾ ಜೊತೆಯಾಗಿದ್ದಾರೆ.