ಮಾಸ್ತಿ ಗುಡಿ ದುರಂತ: ಸಾಹಸ ನಿರ್ದೇಶಕ ರವಿ ವರ್ಮಾ ನಾಪತ್ತೆ!

ಮಂಗಳವಾರ, 8 ನವೆಂಬರ್ 2016 (12:10 IST)
ಬೆಂಗಳೂರು: ಮಾಸ್ತಿ ಗುಡಿ ಚಿತ್ರದಲ್ಲಿ ಪ್ರಾಣಕ್ಕೆ ಕುತ್ತು ತರುವಂತಹ ಸಾಹಸ ದೃಶ್ಯ ನಿರ್ದೇಶನ ಮಾಡಿದ ಸಾಹಸ ನಿರ್ದೇಶಕ ರವಿ ವರ್ಮಾ ಈಗ ನಾಪತ್ತೆಯಾಗಿದ್ದಾರೆ

ನಿನ್ನೆ ದುರಂತ ನಡೆದ ಕೆಲವು ಸಮಯದವರೆಗೆ ಸ್ಥಳದಲ್ಲಿದ್ದ ರವಿ ವರ್ಮಾ ಸ್ಥಳದಲ್ಲಿ ಇಲ್ಲ. ಅಲ್ಲದೆ ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಕಾಣಿಸಿಕೊಂಡಿಲ್ಲ. ಈಗಾಗಲೇ ಪೊಲೀಸರು ಚಿತ್ರತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದು, ರವಿ ವರ್ಮಾ ಕೂಡಾ ಅವರಲ್ಲೊಬ್ಬರು.

ಆದರೆ ಮೃತದೇಹ ಸಿಕ್ಕಿದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಆದರೆ ಪ್ರಕರಣದಲ್ಲಿ ಮುಖ್ಯವಾಗಿ ಜವಾಬ್ದಾರಿ ಹೊತ್ತುಕೊಳ್ಳಬೇಕಿದ್ದ ರವಿ ವರ್ಮಾ ಯಾರ ಸಂಪಕರ್ಕಕ್ಕೂ ಸಿಗದೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ನಡುವೆ ಸಾಹಸ ನಿರ್ದೇಶಕರ ಸಂಘದಿಂದ ಅವರ ಸದಸ್ಯತ್ವ ರದ್ದುಗೊಳಿಸಲು ಚಿಂತಿಸುತ್ತಿರುವುದಾಗಿ ಸಾಹಸ ಕಲಾವಿದರ ಕಾರ್ಯದರ್ಶಿ ರಾಬರ್ಟ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ