ವಿಷ್ಯಾ ಏನಪ್ಪಾ ಅಂದ್ರೆ ಮಾಸ್ತಿಗುಡಿ ಸಿನಿಮಾದಲ್ಲಿ ನಾಗಶೇಖರ್ ಅವರು ಸಿ.ಅಶ್ವತ್ಥ್ ಅವರ ಹಾಡನ್ನು ಬಳಸಿಕೊಳ್ಳುತ್ತೇನೆ ಅಂತಿದ್ದಾರೆ.ಆ ಹಾಡನ್ನು ಬರೆದಿರುವ ಗೀತೆ ರಚನಾಕಾರ ಋಷಿ ಅವರು ಮಾತ್ರ ಈ ಹಾಡು ನನ್ನದು ಅಂತಿದ್ದಾರೆ. ನನ್ನ ಅನುಮತಿಯಿಲ್ಲದೇ ಸಿನಿಮಾದಲ್ಲಿ ಹಾಡನ್ನು ಬಳಸಿಕೊಂಡಿದ್ದಾರೆ ಅಂತಾ ಅವರು ಆರೋಪಿಸಿದ್ದಾರೆ. ಮಾಸ್ತಿ ಗುಡಿ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಆದ್ರೆ ಸಿನಿಮಾದಲ್ಲಿ ವಿಜಿ ಪಾತ್ರಕ್ಕೆ ಹೊಂದುವಂತೆ ಈ ಹಾಡನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ.