ದುನಿಯಾ ವಿಜಯ್ ಗೆಟಪ್, ಆಕ್ಷನ್ ಸೀನ್ಗಳು ಚಿತ್ರದ ಪ್ರಮುಖ ಆಕರ್ಷಣೆ. ಕಾಡನ್ನು ರಕ್ಷಿಸಿ ಎಂಬ ಸಂದೇಶ ಗಮನಸೆಳೆಯುತ್ತದೆ. ಕೃತಿ ಖರಬಂಧ ಮತ್ತು ಅಮೂಲ್ಯಾ ನಾಯಕಿಯರಾಗಿರುವ ಚಿತ್ರದಲ್ಲಿ ಸುಹಾಸಿನಿ, ಡೈನಮಿಕ್ ಸ್ಟಾರ್ ದೇವರಾಜ್ ಸೇರಿದಂತೆ ಮುಂತಾದವರಿದ್ದಾರೆ.
ಈ ಚಿತ್ರದ ಇಬ್ಬರು ಖಳನಟರಾದ ಅನಿಲ್ ಮತ್ತು ಉದಯ್ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಧುಮುಕಿ ದುರಂತ ಸಾವಪ್ಪಿದ್ದರು. ಈ ಘಟನೆ ಬಳಿಕ ಚಿತ್ರದ ನಿರ್ಮಾಪಕ ಪಿ ಸುಂದರ್ ಗೌಡ, ಸ್ಟಂಟ್ ಮಾಸ್ಟರ್ ರವಿವರ್ಮಾ, ನಿರ್ದೇಶಕ ನಾಗಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜಾಮೀನು ಮೇಲೆ ಇವರೆಲ್ಲಾ ಹೊರಬಂದರು. ಈಗ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಗಮನಸೆಳೆದಿದೆ.