ಈಗ ಆ ಜಾಗದಲ್ಲಿ ಹೊಸ ಹುಡುಗಿ ತುಂಬಲು ಕೆಲಸಗಳು ಭರದಿಂದ ಸಾಗಿವೆ. ಡೇಟ್ಸ್ ಕ್ಲಾಶ್ ಎಂಬ ಕಾರಣ ನೀಡಿ ರಚಿತಾ ಹೊರಬರುತ್ತಿದ್ದಾರೆ. ಈ ರೀತಿ ಈಕೆ ಬರುತ್ತಿರುವ ಎರಡನೇ ಚಿತ್ರವಾಗಿದೆ. ಈ ಹಿಂದೆ ಯೋಗರಾಜ್ ಭಟ್ಟರ 'ವಾಸ್ತುಪ್ರಕಾರ' ಚಿತ್ರಕ್ಕೂ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ, 'ರಣವಿಕ್ರಮ' ಚಿತ್ರಕ್ಕೆ ಡೇಟ್ ಹೊಂದಿಸಬೇಕೆಂಬ ಕಾರಣ ನೀಡಿ, ವಾಸ್ತುಪ್ರಕಾರದಿಂದ ಹೊರಗೆ ಬಂದಿದ್ದರು.
ರಣವಿಕ್ರಮದಲ್ಲಿ ಇಬ್ಬರು ನಾಯಕಿಯರಿದ್ದು, ಮತ್ತೂಬ್ಬ ನಾಯಕಿ ಅಂಜಲಿ ಬಳ್ಳಾರಿಯಲ್ಲಿ ಚಿತ್ರೀಕರಣದಲ್ಲಿದ್ದಾರೆ. ಬುಲ್ ಬುಲ್ ಮೂಲಕ ಸಿನಿಮಾ ರಂಗಕ್ಕೆ ಬಂದ ರಚಿತ ಗೆಲುವಿನಿಂದ ಹೆಸರು ಮಾಡಿದ್ದರು. ಈಗ ಹೊರ ಬರುವ ಸಂಗತಿಯಿಂದ ಹೆಚ್ಚು ಹೆಸರು ಮಾಡುತ್ತಿದ್ದಾರೆ.