ದರ್ಶನ್ ಕ್ರಾಂತಿ ಸೆಟ್ ಸೇರಿಕೊಂಡ ಮತ್ತಷ್ಟು ಸ್ಟಾರ್ ಗಳು

ಶುಕ್ರವಾರ, 24 ಡಿಸೆಂಬರ್ 2021 (08:46 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ಮತ್ತಷ್ಟು ನಟರ ಸೇರ್ಪಡೆಯಾಗಿದೆ.

ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಚಿತಾ ರಾಂ ನಾಯಕಿಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರಲ್ಲದೆ, ಕಾಮಿಡಿಗೆ ಸಾಧು ಕೋಕಿಲ ಇರಲಿದ್ದಾರೆ.

ಇದೀಗ ಖ್ಯಾತ ನಟಿ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಕೂಡಾ ಚಿತ್ರತಂಡ ಕೂಡಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಈ ಚಿತ್ರದ ಯಾವುದೇ ಗುಟ್ಟು ಲೀಕ್ ಆಗದಂತೆ ಚಿತ್ರತಂಡ ನೋಡಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ