ಕನ್ನಡ ಚಿತ್ರರಂಗಕ್ಕೆ ಆಕಸ್ಮಿಕವಾಗಿ ಬಂದು ಅದೇರೀತಿ ಆಕಸ್ಮಿಕವಾಗಿ ಮರಣಿಸಿದ ನಟ ರಾಜೇಶ್. ಕಾಡಿನಲ್ಲಿ ತನ್ನ ಬದುಕನ್ನು ನಡೆಸುತ್ತ ಹಾಯಾಗಿದ್ದ ಈತನನ್ನು ಟೀವಿ ಕಾರ್ಯಕ್ರಮ ಕರೆದುತಂತು ನಗರಕ್ಕೆ. ಆ ಬಳಿಕ ನಗರದ ಬದುಕಿಗೂ, ಕಾಡಿನ ಜೀವನಕ್ಕೂ ನಡುವೆ ಇರುವ ವ್ಯತ್ಯಾಸಗಳು ಆತನ ಮನದ ಮೇಲೆ ಪ್ರ ಭಾವ ಬೀರಿದ್ದು ಸತ್ಯ.
ಆ ಕಾರಣ ಮಾತ್ರವಲ್ಲ, ಚಿತ್ರರಂಗವು ಸಹ ಒಂದು ಬಗೆಯಲ್ಲಿ ಈ ಯುವಕನ ಚಿತ್ತದ ಮೇಲೆ ಸಾಕಷ್ಟು ಪರಿಣಾಮ ಪ್ರಭಾವ ಬೀರಿತ್ತು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ರಾಜೇಶ್ ಆತ್ಮ ಮತ್ತೆ ಹಿಂತಿರುಗಿದೆ ರವಿ ಮುಖಾಂತರ. ರವಿ ರಾಜೇಶ್ ಬಾಡಿಗೆಗೆ ಇದ್ದ ಮನೆಯ ಯಜಮಾನರ ಮಗ!
........ಇನ್ನು ಇದೆ. ಮುಂದೆ ಓದಿ.
ಸ್ಥಳೀಯ ಜನರ ಅಭಿಪ್ರಾಯದ ಪ್ರಕಾರ ರಾಜೇಶ್ ಮತ್ತೆ ಹಿಂತಿರುಗಿದ್ದಾನೆ, ಹಾಗೆ ಅನ್ನಿಸಲು ಕಾರಣ, ಕಳೆದ ಕೆಲವು ದಿನಗಳಿಂದ ರವಿಯ ವರ್ತನೆಯು ಥೇಟ್ ರಾಜೇಶ್ ವರ್ತನೆಯಂತೆ ಇತ್ತು ಎನ್ನುವ ಮಾತನ್ನು ಹೇಳಿದ್ದಾರೆ. ಅವರ ಪೋಷಕರು ಸಹ ಅದೇ ನಿರ್ಧಾರಕ್ಕೆ ಬಂದಿದ್ದಾರೆ.