ಸಾಕಷ್ಟು ಗದ್ದಲ ಮಾಡುತ್ತಿರುವ ಚಿತ್ರ ನೀರ್ದೋಸೆ. ಆರಂಭಿಕ ಹಂತದಿಂದಲೂ ಅದು ಅನೇಕ ರೀತಿಯಲ್ಲಿ ಸದ್ದು ಮಾಡಿತ್ತು. ರಮ್ಯ ಮತ್ತು ಜಗ್ಗೇಶ್ ಅವರ ನಟನೆಯಲ್ಲಿ ತಯಾರಾಗುತ್ತಿರುವ ಚಿತ್ರವು ಒಂದಲ್ಲ ಒಂದು ಕಾರಣದಿಂದ ಸುದ್ದಿ ಮಾಡುತ್ತಲೇ ಬಂದಿತ್ತು. ಇತ್ತಿಚೆಗೆ ರಮ್ಯ ಚುನಾವಣೆಯಲ್ಲಿ ಸೋತು ಆಯ್ತು, ಆರ್ಯನ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಆಯ್ತು. ಆ ಚಿತ್ರವೀಗ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈಗ ಮತ್ತೆ ಜಗ್ಗೇಶ್ ಅವರು ನೀರ್ದೊಸೆಯನ್ನು ಹೆಂಚಿನ ಮೇಲೆ ಹಾಕಲು ಸಿದ್ಧತೆ ನಡಿಸಿದ್ದಾರೆ.
ನೀರ್ದೋಸೆ ಶೂಟಿಂಗ್ ಆಗೋಗಿದೆ. ಸದ್ಯಕ್ಕೆ ಎಡಿಟಿಂಗ್ ನಡೀತಾ ಇದೆ. 75 ವರ್ಷಗಳಿಂದ ಕನ್ನಡ ಚಿತ್ರರಂಗ ಓಡ್ತಾನೇ ಇದೆ. ಇಲ್ಲಿ ಎಷ್ಟೋ ಮಂದಿ ಬರ್ತಾರೆ, ಇರ್ತಾರೆ ಮತ್ತೆ ಹೋಗ್ತಾರೆ. ಹಾಗಂತ ಚಿತ್ರರಂಗ ನಿಂತಿದೆಯಾ? ಈ ಕಲಾಲೋಕದ ಅವಕಾಶ ಪಡೆಯೋಕೆ ತುಂಬಾನೇ ಅದೃಷ್ಟ ಮಾಡಿರಬೇಕು.