ಸಕತ್ ಸಂಡೆ ಕಿಚ್ಚನ ಜೊತೆಯಲ್ಲಿ ಪ್ರೇಂ-ಅಮೂಲ್ಯ ಮಾತುಕತೆ

ಶನಿವಾರ, 26 ಜುಲೈ 2014 (09:32 IST)
ಕನ್ನಡ ಚಿತ್ರನಟರು ಬಿಗ್ ಬಾಸ್ ಗೆ ಬರುವುದು ಸಾಮಾನ್ಯ ವಿಷಯ. ಅದರಲ್ಲೂ ತಮ್ಮ ಚಿತ್ರಗಳ ಪ್ರಮೋಶನ್ ಗೆಂದು ಬಂದು ಒಂದಷ್ಟು ಹಾಡಿ, ಮಾತಾಡಿ ಹೋಗೋದು ಸಾಮಾನ್ಯ. ಈ ಬಾರಿ ಬಿಗ್ ಬಾಸ್ ಮನೆಗೆ ಮಳೆ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರುವಂತಹ ಪ್ರೇಂ ಮತ್ತು ಅಮೂಲ್ಯ ಬರುತ್ತಿದ್ದಾರೆ. 
 
ಸಾಕಷ್ಟು ನಿರೀಕ್ಷೆಗಳನ್ನು  ಹೊಂದಿರುವ ಮಳೆ  ಚಿತ್ರದ ಪ್ರಮೋಶನ್ ಗೆಂದು ಸಕತ್ ಸಂಡೆ ಕಿಚ್ಚ ಸುದೀಪ್ ಜೊತೆಗೆ ಕಳೆಯಲು ಬರುತ್ತಿದ್ದಾರೆ. ಇದು ಭಾನುವಾರ ಪ್ರಸಾರ ಆಗುತ್ತದೆ. 
 
...........ಇನ್ನು ಇದೆ. ಮುಂದೆ ಓದಿ. 
 
 

2013 ರ ಬೆಸ್ಟ್ ಆಕ್ಟರ್ ಫಿಲಂ ಫೇರ್ ಅವಾರ್ಡ್  ಪ್ರೇಂ ಮತ್ತು ಅಮೂಲ್ಯ ಗಳಿಸಿದ್ದಾರೆ. ಪ್ರೇಂ ಚಾರ್ಮಿನಾರ್ ಚಿತ್ರದ ನಟನೆಗೆಂದು ಈ ಪ್ರಶಸ್ತಿ ತಮ್ಮದಾಗಿಸಿ ಕೊಂಡಿದ್ದಾರೆ. ಅಮೂಲ್ಯ ಶ್ರಾವಣಿ ಸುಬ್ರಮಣ್ಯ ಚಿತ್ರದ ಅಮೋಘ ನಟನೆಗೆ ಈ ಪ್ರಶಸ್ತಿ ಪಡೆದಿದ್ದಾರೆ.
 
ಈ ಮೊದಲು ಕಾರ್ಯಕ್ರಮಕ್ಕೆ ರವಿಚಂದ್ರನ್, ಖಳನಟ ರವಿ ಶಂಕರ್, ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್,ತಾರ, ರಕ್ಷಿತ್ ಶೆಟ್ಟಿ ಬಂದಿದ್ದರು. ಈ ಬಾರಿ ಈ ಜೋಡಿ ಸಕತ್ ಸಂಡೆಯ ಭಾಗವಾಗಲಿದ್ದಾರೆ!

ವೆಬ್ದುನಿಯಾವನ್ನು ಓದಿ