ಕನ್ನಡ ಚಿತ್ರನಟರು ಬಿಗ್ ಬಾಸ್ ಗೆ ಬರುವುದು ಸಾಮಾನ್ಯ ವಿಷಯ. ಅದರಲ್ಲೂ ತಮ್ಮ ಚಿತ್ರಗಳ ಪ್ರಮೋಶನ್ ಗೆಂದು ಬಂದು ಒಂದಷ್ಟು ಹಾಡಿ, ಮಾತಾಡಿ ಹೋಗೋದು ಸಾಮಾನ್ಯ. ಈ ಬಾರಿ ಬಿಗ್ ಬಾಸ್ ಮನೆಗೆ ಮಳೆ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರುವಂತಹ ಪ್ರೇಂ ಮತ್ತು ಅಮೂಲ್ಯ ಬರುತ್ತಿದ್ದಾರೆ.
ಈ ಮೊದಲು ಕಾರ್ಯಕ್ರಮಕ್ಕೆ ರವಿಚಂದ್ರನ್, ಖಳನಟ ರವಿ ಶಂಕರ್, ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್,ತಾರ, ರಕ್ಷಿತ್ ಶೆಟ್ಟಿ ಬಂದಿದ್ದರು. ಈ ಬಾರಿ ಈ ಜೋಡಿ ಸಕತ್ ಸಂಡೆಯ ಭಾಗವಾಗಲಿದ್ದಾರೆ!