ರುದ್ರಮದೇವಿ ಚಿನ್ನ ಕಳ್ಳತನದ ಮುಂದಿನ ಭಾಗ!

ಸೋಮವಾರ, 28 ಜುಲೈ 2014 (09:37 IST)
ಟಾಲಿವುಡ್ ಸಿನಿಮಾರಂಗದಲ್ಲಿ ಅತ್ಯಂತ  ನಿರೀಕ್ಷೆ ಹೊಂದಿರುವ ಚಿತ್ರ ರಾಣಿ ರುದ್ರಮದೇವಿ. ಈ ಚಿತ್ರದಲ್ಲಿ ಅನುಷ್ಕ ಧರಿಸಿದ್ದ ಒಡವೆಗಳು ಸುಮಾರು ಹತ್ತು ಕೆಜಿಗಳಷ್ಟು  ಬೆಲೆ ಬಾಳುವಂತಹವು ಇತ್ತೀಚಿಗೆ ಕಳುವಾಯಿತು.
 
 ಆಕೆ ಧರಿಸಿದ್ದ ಈ ಒಡವೆಗಳ ಕಳುವು ಶೂಟಿಂಗ್ ತಾಣದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿತ್ತು. ಇದು ನಾನಕ್ರಾಮ್  ಗೂಡಾದಲ್ಲಿ   ರುದ್ರಮ ದೇವಿ ಸೆಟ್ ನಲ್ಲಿ ನಡೆಯಿತು. ಈ ಕಳ್ಳತನ ನಡೆದ ಆಭರಣಗಳಲ್ಲಿ   ಅತ್ಯಂತ ಬೆಲೆಬಾಳುವ ಚಿನ್ನ ಬೆಳ್ಳಿ ಒಡವೆಗಳು ಇದ್ದು  ಈ  ಕಳುವಿನ ಬಗ್ಗೆ    ನಿರ್ದೇಶಕ ಗುಣಶೇಖರ್ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈಗ ರಾಯದುರ್ಗ ಪೊಲೀಸರು ಒಂದು ಒಳ್ಳೆಯ ಕ್ಲೂ ಕಂಡು ಹಿಡಿದಿದ್ದಾರೆ .
 
..........ಇನ್ನು ಇದೆ. ಮುಂದೆ ಓದಿ. 
 
 

ಈ ಹತ್ತು ಕೆಜಿ ಒಡವೆಗಳು ಈಗ ಆಂಜನೇಯ ಶೆಟ್ಟಿ ಗೋಲ್ಡ್ ಮೇಕರ್ಸ್ ಕಂಪನಿಯ ಎಗ್ಜಿಕ್ಯೂಟಿವ್ ಆಗಿರುವ ರವಿ ಸುಬ್ರಮಣ್ಯಂ  ಅವರ ಮನೆಯಲ್ಲಿ ದೊರಕಿವೆ. ರವಿ ಅವರು ಹೇಳುತ್ತಿರುವ ಉತ್ತರ ಪೊಲೀಸರಿಗೆ ನಂಬಿಕೆ ತರಿಸಿಲ್ಲ. 
 
ಆದ್ದರಿಂದ ಅವರು ಆರಂಭದಲ್ಲೇ ರವಿಯನ್ನು ತಮ್ಮ ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಸ್ವಲ್ಪ ದಿನದಲ್ಲೇ ಈ ಕೇಸ್ ಗೆ ಸಂಬಂಧಪಟ್ಟಂತೆ ಅಡಗಿರುವ ರಹಸ್ಯ ಹೊರ ತೆಗೆಯುವುದಾಗಿ ಆಶ್ವಾಸನೆ ನೀಡಿದ್ದಾರೆ ಪೊಲೀಸರು. ನೀತಾಲುಲ್ಲ ಈ ಚಿತ್ರದ ಆಭರಣಗಳನ್ನು ಡಿಜೈನ್ ಮಾಡಿದ್ದಾರೆ. ರಿಯಾಲಿಟಿಗಾಗಿ  ಚಿನ್ನ -ಬೆಳ್ಳಿ ಒಡವೆಗಳನ್ನು ಬಳಕೆಯ ನಿರ್ಧಾರ ತೆಗೆದುಕೊಂಡ   ಚಿತ್ರತಂಡ ಈಗ ಅತಿ ದೊಡ್ಡ ರಿಸ್ಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ ! 

ವೆಬ್ದುನಿಯಾವನ್ನು ಓದಿ