ಆಕೆ ಧರಿಸಿದ್ದ ಈ ಒಡವೆಗಳ ಕಳುವು ಶೂಟಿಂಗ್ ತಾಣದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿತ್ತು. ಇದು ನಾನಕ್ರಾಮ್ ಗೂಡಾದಲ್ಲಿ ರುದ್ರಮ ದೇವಿ ಸೆಟ್ ನಲ್ಲಿ ನಡೆಯಿತು. ಈ ಕಳ್ಳತನ ನಡೆದ ಆಭರಣಗಳಲ್ಲಿ ಅತ್ಯಂತ ಬೆಲೆಬಾಳುವ ಚಿನ್ನ ಬೆಳ್ಳಿ ಒಡವೆಗಳು ಇದ್ದು ಈ ಕಳುವಿನ ಬಗ್ಗೆ ನಿರ್ದೇಶಕ ಗುಣಶೇಖರ್ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈಗ ರಾಯದುರ್ಗ ಪೊಲೀಸರು ಒಂದು ಒಳ್ಳೆಯ ಕ್ಲೂ ಕಂಡು ಹಿಡಿದಿದ್ದಾರೆ .
ಆದ್ದರಿಂದ ಅವರು ಆರಂಭದಲ್ಲೇ ರವಿಯನ್ನು ತಮ್ಮ ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಸ್ವಲ್ಪ ದಿನದಲ್ಲೇ ಈ ಕೇಸ್ ಗೆ ಸಂಬಂಧಪಟ್ಟಂತೆ ಅಡಗಿರುವ ರಹಸ್ಯ ಹೊರ ತೆಗೆಯುವುದಾಗಿ ಆಶ್ವಾಸನೆ ನೀಡಿದ್ದಾರೆ ಪೊಲೀಸರು. ನೀತಾಲುಲ್ಲ ಈ ಚಿತ್ರದ ಆಭರಣಗಳನ್ನು ಡಿಜೈನ್ ಮಾಡಿದ್ದಾರೆ. ರಿಯಾಲಿಟಿಗಾಗಿ ಚಿನ್ನ -ಬೆಳ್ಳಿ ಒಡವೆಗಳನ್ನು ಬಳಕೆಯ ನಿರ್ಧಾರ ತೆಗೆದುಕೊಂಡ ಚಿತ್ರತಂಡ ಈಗ ಅತಿ ದೊಡ್ಡ ರಿಸ್ಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ !