ಕನ್ನಡ ಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದ ಮುಂಬೈ ಮೂಲದ ಹೀರೋ ಧ್ಯಾನ್. ನನ್ನ ಪ್ರೀತಿಯ ಹುಡುಗಿ, ಮೊನಲೀಸ, ಅಮೃತದ ಧಾರೆ ಚಿತ್ರಗಳ ಮುಖಾಂತರ ಮನಗೆದ್ದಿದ್ದ ಚಾಕೊಲೆಟ್ ಹೀರೋ ಸಮೀರ್ ದತ್ತಾನಿ ಯಾನೆ ಧ್ಯಾನ್ 2010 ರಲ್ಲಿ ಹುಡುಗ ಹುಡುಗಿ ಚಿತ್ರದ ನಂತರ ಕನ್ನಡ ಚಿತ್ರರಂಗದ ಬಳಿ ಬಂದಿರಲಿಲ್ಲ. ಆ ಸಿನಿಮ ಹೇಳಲಾಗದಷ್ಟು ಕೆಟ್ಟದಾಗಿ ಸೋತು ಮಕಾಡೆ ಮಲಗಿತ್ತು. ಈಗ ಮತ್ತೆ ಧ್ಯಾನ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.