ಇವರಿಗೊಂದು ಚಾನ್ಸ್ ಬೇಕಂತೆ... ಕೊಡ್ತೀರಾ ?

ಮಂಗಳವಾರ, 29 ಜುಲೈ 2014 (09:22 IST)
ಒಂದ್ ಛಾನ್ಸ್ ಕೊಡಿ  ಎಂದು ಕೇಳೋದು ಸಾಮಾನ್ಯ ಸಂಗತಿ. ಬದುಕಲ್ಲಿ ಎಲ್ಲರು ಒಂದಲ್ಲ  ಒಂದು ಬಾರಿ ಈ ಮಾತು ಕೇಳಿಯೇ ಇರ್ತಾರೆ ಸಂಬಂಧ ಪಟ್ಟವರ ಬಳಿ. ಅಂತಹ ಹೆಸರಿನ ಚಿತ್ರ  ನಿರ್ಮಿಸಿದ್ದಾರೆ ಕನ್ನಡ ಚಿತ್ರತಂಡವೊಂದು!  ಒಂದ್ ಛಾನ್ಸ್  ಕೊಡಿ ಎಂದು ಹೇಳುತ್ತಾ ನಿರ್ದೇಶಕ ಸತ್ಯ ಮಿತ್ರ ಪ್ರೇಕ್ಷಕರ ಬಳಿ ಕೋರಿದ್ದಾರೆ ನಾವು ಟ್ರೈಮಾಡಿದ್ದೇವೆ ಹೊಸತನದ ಚಿತ್ರ ಎನ್ನುವ ಮನದ ಮಾತುಗಳನ್ನು ಆಡಿದ್ದಾರೆ ಮಿತ್ರ. 
 
.......ಇನ್ನು ಇದೆ. ಮುಂದೆ ಓದಿ. 
 
 

ಸಂದೇಶ್ ಪ್ರೊಡಕ್ಷನ್ ಆರ್ ಎಂ ಸುನಿಲ್ ಕುಮಾರ್  ಅವರು ಚಿತ್ರದ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರು ಸಹ ಹೊಸಬರು ಈ ಚಿತ್ರರಂಗಕ್ಕೆ. ಅಜಿತ್ ಪಟ್ರೆ, ರವಿಶಂಕರ್ ಗೌಡ,ಬಿ ಸಿ ಪಾಟೀಲ್ ಡಾಕ್ಟರ್ ನಂದಿನಿ,ಶ್ರುತಿ,ಸಾಧು ಕೋಕಿಲ ಟೆನ್ನಿಸ್ ಕೃಷ್ಣ,ಮೂಗು ಸುರೇಶ್ ಹಾಗೂ ಇತರರು ಅಭಿನಯಿಸಿರುವ ಒಂದ್ ಛಾನ್ಸ್ ಕೊಡಿ ಸಿನೆಮಾ ಈಗಾಗಲೇ ಪ್ರಥಮ ಪ್ರತಿ ಸಿದ್ದ ಆಗಿದ್ದು ಸೆನ್ಸಾರ್ ಗೆ ಸಿದ್ಧವಾಗಿದೆ. ಮ್ಯಾಥಿವ್ ರಾಜನ್ ಛಾಯಾಗ್ರಹಣ,ಮೈಸೂರ್ ಮೋಹನ್ ಅವರ ಸಂಗೀತ,ನಾಗೇಶ್,ರಾಮು ಅವರ ನೃತ್ಯ ಚಿತ್ರಕ್ಕಿದೆ. ಅವರಿಗೆ ಗೆಲ್ಲುವ ಚಾನ್ಸ್ ಪ್ರೇಕ್ಷಕರು ನೀಡ್ತಾರ ಅನ್ನೋದೇ ಈಗಿರುವ ಪ್ರಶ್ನೆ !

ವೆಬ್ದುನಿಯಾವನ್ನು ಓದಿ