ಸುಧಾ ಮೂರ್ತಿ ಅವರ ತುಮುಲ ಕಾದಂಬರಿ ಆಧಾರಿತ ಚಿತ್ರದಲ್ಲಿ ಪುನೀತ್ ನಟನೆ

ಬುಧವಾರ, 30 ಜುಲೈ 2014 (09:29 IST)
ಕನ್ನಡ ಚಿತ್ರರಂಗದ  ವಿಭಿನ್ನ  ನಿರ್ದೇಶಕ-ನಟ ಟಿ ಎಸ್ ನಾಗಾಭರಣ. ಅವರು ಈಗ ತಮ್ಮ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಹೀರೋ ಮಾಡಿಕೊಂಡಿದ್ದಾರೆ. ಈ ಚಿತ್ರವು ಸುಧಾ ಮೂರ್ತಿ ಅವರ ತುಮುಲ ಕಾದಂಬರಿಯನ್ನು ಆಧರಿಸಿದೆ. ಇದಕ್ಕೆ ಪೂರಕವಾದ ಚಿತ್ರ ಕಥೆಯನ್ನು ಸಂಭಾಷಣೆ ಸಿದ್ಧ ಮಾಡಿದ್ದಾರೆ ನಿರ್ದೇಶಕರು . ಪುನೀತ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. 
 
ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಈ ಕಥೆ ಮತ್ತು ಪ್ರಾಜೆಕ್ಟ್ ಅತ್ಯಂತ ಖುಷಿ ಕೊಟ್ಟಿದೆಯಂತೆ. 
 
ಪುನೀತ್ ಈ ಚಿತ್ರದಲ್ಲಿ ನಟಿಸುವುದಕ್ಕೆ ಸಮ್ಮತಿ ನೀಡಿದ್ದಾರೆ. ಜನಕ್ಕೆ ಆಪ್ತ ಆಗುವ ಮತ್ತು ಇಷ್ಟ ಆಗುವಂತಹ ಚಿತ್ರಗಳಲ್ಲಿ ನಟಿಸುವುದಕ್ಕೆ ಆದ್ಯತೆ ನೀಡಿರುವ ಪುನೀತ್ ತುಮಲ ಚಿತ್ರದಲ್ಲಿ ನಟಿಸಲು ಸಿದ್ಧ ಆಗಿದ್ದಾರೆ.
 
 ............ಇನ್ನು ಇದೆ ಮುಂದೆ ಓದಿ. 
 
 

ಬರಹಗಾರ್ತಿ ಸುಧಾ ಮೂರ್ತಿ ಅವರ ಬಳಿ ಸಿನಿಮಾಕ್ಕೆ ಪೂರಕ ಆಗುವಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದಾಗಿ ಪರ್ಮಿಶನ್ ಪಡೆದು ಆ ಕಥೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ನಾಗಾಭರಣ. ಈ ಚಿತ್ರವು ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ಕಥೆಯನ್ನು ಹೋಲುತ್ತದೆ. ಆ ಚಿತ್ರವು ಸಹ ಕಾದಂಬರಿ ಆಧರಿಸಿದ್ದು. 
 
ಪುನೀತ್ ಅನೇಕ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಸಹ ಕಾದಂಬರಿ ಆಧರಿಸಿದ ಚಿತ್ರಗಳಲ್ಲಿ ನಟಿಸಿರಲಿಲ್ಲ ಹೀರೋ ಆಗಿ. ಆದರೆ ಈಗ ತುಮುಲ ಮುಖಾಂತರ ಹೊಸ ಭಾಷ್ಯ ಬರೆಯಲು ಸಿದ್ಧ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ