ಕಿಚ್ಚ ಸುದೀಪ್ ಅವರು ಬಹುನಿರೀಕ್ಷೆಯ ಚಿತ್ರ ಅತ್ತಾರಿಂಟಿಕಿ ದಾರೇದಿ ತೆಲುಗು ಚಿತ್ರದ ಕನ್ನಡ ಅವತರಣಿಕೆ. ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಸದ್ದು ಮಾಡುತ್ತಿತ್ತು. ಹೀರೋಯಿನ್ ಗಳ ಆಯ್ಕೆ, ಆ ಹೀರೋಯಿನ್ ಗಳ ಕಥೆ, ಹೀಗೆ ಹತ್ತು ಹಲವಾರು. ಅಂತಿಮವಾಗಿ ಈಗ ಎಲ್ಲವು ಸಿದ್ಧವಾಗಿದ್ದು ಮುಹೂರ್ತವು ಸಹಿತ ನಡೆದಿದೆ.
ಬುಧವಾರ ಬೆಂಗಳೂರು ನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಇರುವ ಗಣಪತಿ ದೇಗುಲದಲ್ಲಿ ಕಿಚ್ಚ ಅವರ ಈ ಚಿತ್ರವು ಮುಹೂರ್ತ ನೆರವೇರಿಸಿ ಕೊಂಡಿತು. ಅಲ್ಲಿಗೆ ನಿರ್ದೇಶಕ ನಂದಕಿಶೋರ್, ಸುದೀಪ್, ಕೋಚ್ ಅನಿಲ್, ಯೋಗೀಶ್ ದ್ವಾರ್ಕೀಶ್ ಅವರ ಸಮ್ಮುಖದಲ್ಲಿ ನಡೆಯಿತು. ಈ ಚಿತ್ರದ ಚಿತ್ರೀಕರಣ ಇಂದಿನಿಂದ ಹೈದರಾಬಾದ್ ನಲ್ಲಿ ನೆರವೇರಲಿದೆ. ಪ್ರಕಾಶ್ ರಾಜ್ , ದೇವರಾಜ್ ಸೇರಿದಂತೆ ಅನೇಕ ಪ್ರಸಿದ್ಧರ ತಂಡವೇ ಈ ಚಿತ್ರದಲ್ಲಿದೆ.