ನಯನತಾರ ಮೊದಲು ತನ್ನನ್ನು ಹೆಚ್ಚು ಗುರುತಿಸಿಕೊಂಡಿದ್ದು ಶಿಂಬು ಜೊತೆಗಿನ ಪ್ರಣಯದಿಂದ ಅದಾದ ಬಳಿಕ ಈ ಜೋಡಿ ಒಡೆದು ಹೋಯ್ತು . ಆನಂತರ ಆಕೆ ತನ್ನ ಗಮನ ಕೇಂದ್ರೀಕರಿಸಿದ್ದು ಪ್ರಭುದೇವ ಅವರ ಕಡೆಗೆ. ಮದುವೆ ಆಗೇ ಹೋಯ್ತು ಅಥವಾ ಇನ್ನೇನು ಆಗುತ್ತೆ ಎಂದು ಚಿತ್ರಮಂದಿ ನಂಬಿದ್ದ ಸಮಯದಲ್ಲಿ ಈ ತಾರಾಜೋಡಿ ಬೇರ್ಪಟ್ಟರು. ಅದಾದ ಸ್ವಲ್ಪ ಕಾಲದ ಬಳಿಕ ಶಿಂಬು ಅವರ ಜೊತೆ ಮತ್ತೆ ಪ್ರಣಯದಾಟದಲ್ಲಿ ತೊಡಗಿದ್ದಾಳೆ ನಯನ ಎನ್ನುವ ಸುದ್ದಿ ಹೊರ ಬಿದ್ದಿತ್ತು. ಆದರೆ ಅದು ಶುದ್ಧ ಸುಳ್ಳು ಎಂದುಹೇಳಿ ಎಲ್ಲರ ಬಾಯ್ ಮುಚ್ಚಿಸಿದ್ದಳು.
...........ಇನ್ನು ಇದೆ. ಮುಂದೆ ಓದಿ
ಹೀಗೆ ಇರುವಾಗ ಆಕೆ ಆರ್ಯ ಜೊತೆ ರಾಜರಾಣಿ ಅನ್ನುವ ಸೂಪರ್ಹಿಟ್ ಚಿತ್ರದಲ್ಲಿ ನಟಿಸಿದಳು. ಆ ಹೀರೊ ಜೊತೆ ಅದೇನೋ ನಡೀತಾ ಇದೆ ಎನ್ನುವ ಸುದ್ದಿಯು ಹೆಚ್ಚು ಪಾಪ್ಯುಲರ್ ಆಯ್ತು. ಅವರಿಬ್ಬರೂ ಅಲ್ಲಿದ್ದರಂತೆ ಇಲ್ಲಿದ್ದರಂತೆ ಎನ್ನುವ ಗಾಸಿಪ್ಸ್ ಗಳಿಗೆ ಹೆಚ್ಚು ಬೆಲೆ ದೊರಕಿತು. ಇದರ ಪರಿಣಾಮ ಎಲ್ಲರ ಗಮನ ಮತ್ತೆ ಆಕೆಯತ್ತ.