ಗೆಲುವಿನ ಹಾದಿಯಲ್ಲಿ ಕನ್ನಡ ಚಿತ್ರರಂಗ.. ಅರ್ಧ ಶತಕ ಬಾರಿಸಿದ ರವಿಮಾಮ ಅಭಿನಯದ ದೃಶ್ಯ ...

ಮಂಗಳವಾರ, 12 ಆಗಸ್ಟ್ 2014 (10:00 IST)
ಸಾಕಷ್ಟು ದಿನಗಳ ಕಾಲ ಆ ಚಿತ್ರಕ್ಕೆ ಹೆಸರು ಯಾವುದು ಎನ್ನುವ ಸಂಗತಿ ಗೊತ್ತೇ ಇರಲಿಲ್ಲ ಅವರ ಅಭಿಮಾನಿಗಳಿಗೆ. ಅದಾದ ಬಳಿಕ ಅವರ ಜನ್ಮದಿನಿದಂದು ಚಿತ್ರ ಬಿಡುಗಡೆ ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಅಂತಿಮವಾಗಿ ಇನ್ನೇನು ಚಿತ್ರ ಬಿಡುಗಡೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಇದೆ ಎನ್ನುವ ಸಮಯದಲ್ಲಿ ಈ ಚಿತ್ರಕ್ಕೆ ಒಂದು ಹೆಸರು ದೊರಕಿತು. ಇಷ್ಟೆಲ್ಲಾ ಕಥೆಗಳನ್ನು ಹೊಂದಿರೋದು ವಿ. ರವಿಚಂದ್ರನ್ ನಟನೆಯ ದೃಶ್ಯ ಚಿತ್ರದ ಬಗ್ಗೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹುನಿರೀಕ್ಷೆಯ ಚಿತ್ರ ಹಾಗೂ ಮೊಟ್ಟಮೊದಲ ಬಾರಿಗೆ ಪಿ ವಾಸು ಅವರ ನಿರ್ದೇಶನದಲ್ಲಿ ರವಿ ಮಾಮ ಅವರು ನಟಿಸಿ ಚಿತ್ರ ದೃಶ್ಯದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇತೂ. ಆ ನಿರೀಕ್ಷೆಗಳನ್ನು  ಪೂರ್ಣ ಮಾಡಿದೆ ಚಿತ್ರ ಅಲ್ಲದೆ ಈಗ ಅದು 50  ನೇ ದಿನದ ಸಂಭ್ರಮವನ್ನು ಅಭಿಮಾನಿಗಳಿಗೆ ಹಂಚುತ್ತಿದೆ.
 
ಮಲೆಯಾಳಂ ಚಿತ್ರ ದೃಶ್ಯಂ ಚಿತ್ರದ ಕನ್ನಡ ಅವತರಣಿಕೆ ಆಗಿರುವ ದೃಶ್ಯ ಚಿತ್ರದಲ್ಲಿ ರವಿಮಾಮ ಜೊತೆಯಲ್ಲಿ ನವ್ಯ ನಾಯರ್ ಸಹ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಮೂಲ ಚಿತ್ರದಲ್ಲಿ ಮೋಹನ್ಲಾಲ್ ಮತ್ತು ಮೀನ ನಟಿಸಿದ್ದರು. ಕನ್ನಡದಲ್ಲಿ ಆಪತ್ ಮಿತ್ರ ಚಿತ್ರದ ಮೂಲಕ ಎಂಟ್ರಿ ಆದ ವಾಸು ಅವರು ಆ ಬಳಿಕ ಅದೇ ಚಿತ್ರವನ್ನು ಚಂದ್ರಮುಖಿ ಹೆಸರಲ್ಲಿ ತಮಿಳಿನಲ್ಲಿ ನಿರ್ಮಿಸಿಸಿದ್ದರು. ಈಗ ಕನ್ನಡದಲ್ಲಿ ದೃಶ್ಯ ನಿರ್ದೇಶಿಸಿ ಗೆದ್ದಿದ್ದಾರೆ ಮತ್ತೆ! 
 
ಕಿಚ್ಚ  ಸುದೀಪ್ ಮತ್ತು ರವಿಚಂದ್ರನ್ ನಟನೆಯ ಮಾಣಿಕ್ಯ ಈಗ ನೂರರ ಖುಷಿಯಲ್ಲಿದೆ. ಅದೇ ರೀತಿ ವಿ ರವಿಚಂದ್ರನ್ ಅವರ ಚಿತ್ರವೂ ೫೦ ನೇ ದಿನದ ಸಂಭ್ರಮ ಹೊಂದಿದೆ. ಈ ಚಿತ್ರವು ರಾಜ್ಯದ 15ಥಿಯೇಟರ್ ಗಳಲ್ಲಿ  50  ದಿನಗಳನ್ನು ಪೂರೈಸಿದೆ. ಕರ್ನಾಟಕವಿಡಿ 40  ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿತ ಆಗುತ್ತಿದೆ. 

ವೆಬ್ದುನಿಯಾವನ್ನು ಓದಿ