ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಕಾಲ ಸನ್ನಿಹಿತ ಆಗಿದೆಯೇ ಎನ್ನುವ ಪ್ರಶ್ನೆಗೆ ಈಗ ಸ್ಪಷ್ಟ ರೂಪ ಬರುವ ಕಾಲ ಬಂದಿದೆ. ಏಕೆಂದರೆ ಅವರು ಈಗ ಅಂತಹ ಭಾವ ಬರುವಂತಹ ಮಾತುಗಳನ್ನು ಮೀಡಿಯಾದವರ ಮುಂದೆ ಆಡಿದ್ದಾರೆ. ರಾಜಕೀಯ ಕ್ಷೇತ್ರ ಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗೆ ಪುಷ್ಟಿ ದೊರಕುವಂತೆ ಮಾತಾಡಿದ್ದಾರೆ ಸೂಪರ್ ಸ್ಟಾರ್. ಇತ್ತೀಚಿಗೆ ಅವರ ಬೆಂಗಳೂರಲ್ಲಿ ಮಾಧ್ಯಮದವರ ಮುಂದೆ ಆಡಿದ ಮಾತು ಸಂಚಲನ ಉಂಟು ಮಾಡಿದೆ ಎಂದೇ ಹೇಳ ಬಹುದಾಗಿದೆ. ಇದು ಕಾಲಿವುಡ್ ಮೀಡಿಯಾದವರ ಹಾಟ್ ಟಾಪಿಕ್ ಆಗಿದೆ.