ನೀವ್ಯಾರು ನನಗೆ ಗೊತ್ತೇ ಇಲ್ಲ ಎಂದು ಶಿವರಾಮಣ್ಣ ಅವರನ್ನು ಅಪಮಾನಿಸಿದ ಪೂಜಾಗಾಂಧಿ

ಮಂಗಳವಾರ, 19 ಆಗಸ್ಟ್ 2014 (09:55 IST)
ಸರಿಸುಮಾರು 50 ಕ್ಕೂ ಅಧಿಕ ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಜಾತ ಶತ್ರು ನಟ ಶಿವರಾಂ ಎಲ್ಲ ಪ್ರೀತಿಯ ಶಿವರಾಮಣ್ಣ . ಅವರ ಬಗ್ಗೆ ನಟಿ ಪೂಜಾಗಾಂಧಿ ಹೇಳಿದ ಮಾತು ಶಿವರಾಮಣ್ಣನ ಮನಕ್ಕೆ ನೋವು ಉಂಟು ಮಾಡಿದೆ. ನೀವು ಯಾರು ನನಗೆ ಗೊತ್ತೇ ಇಲ್ಲ ಎನ್ನುವ ಮಾತನ್ನು ಆಕೆ ಹಿರಿಯ ಕಲಾವಿದರಿಗೆ ಹೇಳಿದ್ದಾಳೆ. 
 
ಕನ್ನಡ ಸಿನಿಮಾ ರಂಗದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಪೂಜಾಗಾಂಧಿಗೆ ಈಗ ಟೈಮೆ ಸರಿ ಇಲ್ಲ. ತಾನು ನಟಿಸಿದ ಚಿತ್ರಗಳೆಲ್ಲವೂ ತೋಪೆದ್ದು ಹೋದರು ಸಹ ಆಕೆಯ ಅಜ್ಞಾನ ಇನ್ನು ಕಡಿಮೆ ಆಗಿಲ್ಲ ಎಂದೇ ಹೇಳ ಬಹುದಾಗಿದೆ. ಪ್ರಸ್ತುತ ವಿವಾದಗಳ ಸುಳಿಯಲ್ಲಿ  ಸಿಕ್ಕು ಒದ್ದಾಡುವ ಪರಿಸ್ಥಿತಿ ಉಂಟಾಗಿದೆ ಪೂಜಮ್ಮನಿಗೆ! ಆಕೆಯ ಅಭಿನೇತ್ರಿ ಚಿತ್ರದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎನ್ನುವ ಸುದ್ದಿಯು ಆಕೆ ಬಹು ನಿರೀಕ್ಷಿತ ಚಿತ್ರ  ಅಭಿನೇತ್ರಿಗೆ ಜೀವದಾನ ಸಿಗುವ ಸಾಧ್ಯತೆಗಳು ಕ್ಷೀಣಿಸುತ್ತಿದೆ ಎಂದೇ ಹೇಳ ಬಹುದಾಗಿದೆ. 
 
...........ಇನ್ನು ಇದೆ. ಮುಂದೆ ಓದಿ. 
 
 

ಮನೆಯಂಗಳದಲ್ಲಿ ಮಾತುಕತೆ ಎನ್ನುವ ಕಾರ್ಯಕ್ರಮದಲ್ಲಿ  ತಮಗಾದ ಅಪಮಾನದ ಸಂಗತಿಯನ್ನು ಹೇಳಿದ್ದು ಕನ್ನಡದ  ಅಭಿಜಾತ ಕಲಾವಿದ ಶಿವರಾಂ. ಕನ್ನಡ ಇಂಡಸ್ಟ್ರಿ ಯಲ್ಲಿ  ನನಗಿಂತ  ಯಾರಿಗೂ ಗೊತ್ತಿಲ್ಲ ಪುಟ್ಟಣ್ಣಾಜಿ  ಅವರ ಬಗ್ಗೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.  
 
ಪುಟ್ಟಣ್ಣ ಅನೇಕಾನೇಕ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ಮಾಡಿಕೊಟ್ಟಿದ್ದರು ಚಿತ್ರರಗದಲ್ಲಿ ಬೆಳೆಯಲು. ಕಥಾ ಸಂಗಮ ಚಿತ್ರದಲ್ಲಿ ಇಂದಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟಿಸಿದ್ದರು ಎನ್ನುವುದನ್ನು ಇಲ್ಲಿ  ನೆನಪಿಸಿಕೊಳ್ಳ ಬಹುದು ! 
 ಅಭಿನೇತ್ರಿ ಚಿತ್ರದಲ್ಲಿ ಅತುಲ್ ಕುಲಕರ್ಣಿ ಅವರನ್ನು ಪುಟ್ಟಣ್ಣ ಕಣಗಾಲ್ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು, ಪೂಜಾಗಾಂಧಿ ಆ ಪಾತ್ರವನ್ನು ಕೆಟ್ಟದಾಗಿ ತೋರಿಸಿದ್ದಾರೆ. ಮಿನುಗುತಾರೆ ಕಲ್ಪನ ಅವರ ಜೀವನ ಚರಿತ್ರೆಯ ಕಥೆ ಎಂದು ತಿಪ್ಪೆ ಸಾರಿಸಿ ಕೋರ್ಟ್ ನಿಂದ ಬಚಾವ್ ಆದ ಪೂಜಾಗಾಂಧಿಯ ಅಭಿನೇತ್ರಿ ಬಿಡುಗಡೆ ಸಾಧ್ಯತೆ ಕಳೆದು ಕೊಂಡಿದೆ. ಏಕೆಂದರೆ ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಈಗ ಪೂಜಾ ಮೇಲೆ ಕೇಸ್ ಹಾಕಿದ್ದಾರೆ. 

ವೆಬ್ದುನಿಯಾವನ್ನು ಓದಿ