ಕನ್ನಡ ಸಿನಿಮಾ ರಂಗದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಪೂಜಾಗಾಂಧಿಗೆ ಈಗ ಟೈಮೆ ಸರಿ ಇಲ್ಲ. ತಾನು ನಟಿಸಿದ ಚಿತ್ರಗಳೆಲ್ಲವೂ ತೋಪೆದ್ದು ಹೋದರು ಸಹ ಆಕೆಯ ಅಜ್ಞಾನ ಇನ್ನು ಕಡಿಮೆ ಆಗಿಲ್ಲ ಎಂದೇ ಹೇಳ ಬಹುದಾಗಿದೆ. ಪ್ರಸ್ತುತ ವಿವಾದಗಳ ಸುಳಿಯಲ್ಲಿ ಸಿಕ್ಕು ಒದ್ದಾಡುವ ಪರಿಸ್ಥಿತಿ ಉಂಟಾಗಿದೆ ಪೂಜಮ್ಮನಿಗೆ! ಆಕೆಯ ಅಭಿನೇತ್ರಿ ಚಿತ್ರದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎನ್ನುವ ಸುದ್ದಿಯು ಆಕೆ ಬಹು ನಿರೀಕ್ಷಿತ ಚಿತ್ರ ಅಭಿನೇತ್ರಿಗೆ ಜೀವದಾನ ಸಿಗುವ ಸಾಧ್ಯತೆಗಳು ಕ್ಷೀಣಿಸುತ್ತಿದೆ ಎಂದೇ ಹೇಳ ಬಹುದಾಗಿದೆ.
ಅಭಿನೇತ್ರಿ ಚಿತ್ರದಲ್ಲಿ ಅತುಲ್ ಕುಲಕರ್ಣಿ ಅವರನ್ನು ಪುಟ್ಟಣ್ಣ ಕಣಗಾಲ್ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು, ಪೂಜಾಗಾಂಧಿ ಆ ಪಾತ್ರವನ್ನು ಕೆಟ್ಟದಾಗಿ ತೋರಿಸಿದ್ದಾರೆ. ಮಿನುಗುತಾರೆ ಕಲ್ಪನ ಅವರ ಜೀವನ ಚರಿತ್ರೆಯ ಕಥೆ ಎಂದು ತಿಪ್ಪೆ ಸಾರಿಸಿ ಕೋರ್ಟ್ ನಿಂದ ಬಚಾವ್ ಆದ ಪೂಜಾಗಾಂಧಿಯ ಅಭಿನೇತ್ರಿ ಬಿಡುಗಡೆ ಸಾಧ್ಯತೆ ಕಳೆದು ಕೊಂಡಿದೆ. ಏಕೆಂದರೆ ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಈಗ ಪೂಜಾ ಮೇಲೆ ಕೇಸ್ ಹಾಕಿದ್ದಾರೆ.