ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಒಬ್ರು. ಅವರು ಏನೇ ಮಾಡಿದ್ರು ಎಲ್ಲಕ್ಕೂ ಲೆಕ್ಕಾಚಾರ ಇದ್ದೆ ಇರುತ್ತದೆ. ಅದೇರೀತಿ ಅವರು ಈಗ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ 2 ರಿಯಾಲಿಟಿ ಶೋನಲ್ಲಿ ಬಿಟ್ಟಿಯಾಗಿ ಭಾಗವಹಿಸಲ್ಲ ಎಂದು ಹೇಳಿದ್ದಾರೆ. ಅಂಬರೀಶ ಆಡಿಯೋ ಬಿಡುಗಡೆಯ ಸಮಯದಲ್ಲಿ ಮಾತನಾಡುತ್ತಾ ಹೇಳಿದ ದರ್ಶನ್ ಬಿಗ್ ಬಾಸ್ ನ ಅತಿಥಿಯಾಗಿ ಸುಮ್ಮನೆ ಹೋಗಲ್ಲ ನಾನು, ನನ್ನ ಆಪ್ತಮಿತ್ರ ಕಿಚ್ಚ ಸುದೀಪ್ ಅದನ್ನು ನಡೆಸಿಕೊಡುತ್ತಿದ್ದರು ಸಹ ಸುಖಾಸುಮ್ಮನೆ ಹೋಗಿ ಬರುವ ಹುಂಬತನ ಮಾಡಲ್ಲ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮ ಚಾರಿಟಿಗಾಗಿ ಆಗುತ್ತಿದ್ದರೆ ನಾನು ಯಾವುದೇ ರೀತಿಯಲ್ಲೂ ಹಣ ಪಡೆಯದೇ ಹೋಗಿ ಬರುತ್ತಿದ್ದೆ. ಆದರೆ ಇದರಲ್ಲಿ ನನ್ನ ಗೆಳೆಯ ಸುದೀಪ್ ಸಹ ಹಣ ಪಡೆದೆ ಕೆಲಸ ಮಾಡೋದು, ಸೊ ನಾನ್ಯಾಕೆ ಸುಮ್ಮನೆ ಹೋಗಲಿ ಹಾಗೂ ನಾನು ಭಾಗವಹಿಸಲು ಹಣ ಕೇಳುವುದು ಯಾವರೀತಿಯಲ್ಲೂ ತಪ್ಪು ಎಂದು ಅನ್ನಿಸಿಲ್ಲ ಎಂದು ಹೇಳಿದ್ದಾರೆ ದರ್ಶನ್.