ಡಾ. ರಾಜ್ಪೂ ಕುಮಾರ್ ಕುಟುಂಬದ ಮೂರನೇ ಪೀಳಿಗೆ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್ ಅವರು ಸಿನಿಮಾದಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಸಿದ್ಧಾರ್ಥ ಅವರ ಮೊದಲ ಚಿತ್ರ. ಪೂರ್ಣಿಮಾ ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ಡಾ. ರಾಜ್ ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸುತ್ತಿರುವ ಸಿದ್ಧಾರ್ಥ . ಅತ್ಯಂತ ಅದ್ಧೂರಿಯಿಂದ ಸಿದ್ಧ ಆಗುತ್ತಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣ ಆಗಿದೆ. ಉಳಿದ ದಿನಗಳನ್ನು ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಇದೆ ತಿಂಗಳು 22 ರಂದು ಅಂದರೆ ನಾಳೆಯಿಂದ ಮಾಡಲು ಸಿದ್ಧತೆ ನಡೆಸಿದೆ. ಸುಮಾರು ಐದು ದಿವಸಗಳ ಕಾಲ ಹೈದರಾಬಾದ್ ಸುತ್ತಮುತ್ತಚಿತ್ರೀಕರಣ ನಡೆಯಲಿದೆ.
ಕೆಲವೊಂದು ಸನ್ನಿವೇಶಗಳು ಹಾಗೂ ಗೀತೆಗಳ ಚಿತ್ರೀಕರಣ ಬಾಕಿ ಇದೆ. ಹೈದರಾಬಾದ್ ಬಳಿಕ ಚಿತ್ರತಂಡ ಗೋವಾದತ್ತ ಪ್ರಯಾಣ ಬೆಳಸಲಿದೆ. ಈ ಸಂಗತಿ ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ. ರಘು ಸಮರ್ಥ ಸಂಭಾಷಣೆ, ಜಯಂತ್ ಕಾಯ್ಕಿಣಿ ಸಾಹಿತ್ಯ , ಎಂ.ವಿ. ಕೃಷ್ಣಕುಮಾರ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಚಿತ್ರಕಥೆ ಮತ್ತು ನಿರ್ದೇಶನದ ಹೊಣೆ ಪ್ರಕಾಶ್ ಜಯರಾಂ ರಾಮ್ ಹೊತ್ತಿದ್ದಾರೆ.ಅಪೂರ್ವ ಅರೋರ, ಆಶಿಷ್ ವಿದ್ಯಾರ್ಥಿ, ಅಚ್ಯುತಕುಮಾರ್, ಸಾಧುಕೋಕಿಲ, ಅಶೋಕ್, ಸುಧಾರಾಣಿ, ಮುಂತಾದವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.