ಮೇಘನ ರಾಜ್ ಆರಂಭದಲ್ಲಿ ಹೆಚ್ಚಿನ ಗೆಲುವು ಕಾಣಲೇ ಇಲ್ಲ. ಇದಕ್ಕಾಗಿ ಆಕೆ ಅವಕಾಶಗಳನ್ನು ಅರಸಿ ಹೋಗಿದ್ದು ಬೇರೆ ಭಾಷೆಯ ಚಿತ್ರರಂಗಗಳ ಕಡೆಗೆ. ಅಂತಿಮವಾಗಿ ಆಕೆಗೆ ರಾಜ ಹುಲಿ ಜೀವದಾನ ಮಾಡಿತು. ಯಶ್ ಜೊತೆಗೆ ನಟಿಸಿದ್ದ ಆಕೆಯು ಆ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ತನ್ನ ಪ್ರತಿಭೆ ತೋರಲು ಆರಂಭ ಮಾಡಿದಳು. ಅದಾದ ಬಳಿಕ ಆಕೆಗೆ ಶ್ರೀ ನಗರ ಕಿಟ್ಟಿ ಜೊತೆ ಬಹು ಪರಾಕ್ ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿತು. ಈ ಚಿತ್ರವೂ ಸಹಿತ ಜನಮನ ಗೆದ್ದಿದೆ. ಈಗ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಅವಕಾಶ ಗಳಿಸಿದ್ದಾಳೆ ಈ ಚೆಲುವೆ. ನಾಗಾಭರಣ ಅವರ ನಿರ್ದೇಶನದ ಅಲ್ಲಮ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾಳೆ. ಇದರಲ್ಲಿ ಈಕೆ ನವನಟ ಧನಂಜಯ್ ಅವರ ಜೊತೆ ಅಭಿನಯಿಸುತ್ತಿದ್ದಾಳೆ.
ಈ ಚಿತ್ರದ ಶೂಟಿಂಗ್ ಅಕ್ಟೋಬರ್ ತಿಂಗಳಿನಿಂದ ಆರಂಭ ಆಗಲಿದೆ ಎಂದು ಚಿತ್ರತಂಡದಿಂದ ಮಾಹಿತಿ ಬಂದಿದೆ. ಮುಖ್ಯವಾಗಿ ಈ ಚಿತ್ರವು 12 ನೇ ಶತಮಾನದ ಕಥಾ ಹಂದರ ಹೊಂದಿದ್ದು, ಈವರೆಗೂ ಗ್ಲಾಮಿಯಾಗಿದ್ದ ಮೇಘನ ಇದರಲ್ಲಿ ಐತಿಹಾಸಿಕ ಪಾತ್ರದಲ್ಲಿ ಮಿಂಚಲು ಹೊರಟಿದ್ದಾಳೆ.