ಅಲ್ಲಮ ಚಿತ್ರದಲ್ಲಿ ಮೇಘನಾ ರಾಜ್.. ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿಸಿ ಕೊಳ್ಳುತ್ತಿರುವ ತಾರೆ

ಶನಿವಾರ, 30 ಆಗಸ್ಟ್ 2014 (08:56 IST)
ಮೇಘನ ರಾಜ್ ಆರಂಭದಲ್ಲಿ ಹೆಚ್ಚಿನ ಗೆಲುವು  ಕಾಣಲೇ  ಇಲ್ಲ. ಇದಕ್ಕಾಗಿ ಆಕೆ ಅವಕಾಶಗಳನ್ನು ಅರಸಿ ಹೋಗಿದ್ದು  ಬೇರೆ ಭಾಷೆಯ ಚಿತ್ರರಂಗಗಳ ಕಡೆಗೆ. ಅಂತಿಮವಾಗಿ ಆಕೆಗೆ ರಾಜ ಹುಲಿ ಜೀವದಾನ ಮಾಡಿತು. ಯಶ್ ಜೊತೆಗೆ ನಟಿಸಿದ್ದ ಆಕೆಯು ಆ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ  ತನ್ನ ಪ್ರತಿಭೆ ತೋರಲು ಆರಂಭ ಮಾಡಿದಳು. ಅದಾದ ಬಳಿಕ ಆಕೆಗೆ ಶ್ರೀ ನಗರ ಕಿಟ್ಟಿ ಜೊತೆ ಬಹು ಪರಾಕ್ ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿತು. ಈ ಚಿತ್ರವೂ ಸಹಿತ ಜನಮನ ಗೆದ್ದಿದೆ. ಈಗ ಕನ್ನಡ  ಚಿತ್ರರಂಗದಲ್ಲಿ ಮತ್ತೊಂದು ಅವಕಾಶ ಗಳಿಸಿದ್ದಾಳೆ ಈ ಚೆಲುವೆ. ನಾಗಾಭರಣ ಅವರ ನಿರ್ದೇಶನದ ಅಲ್ಲಮ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾಳೆ. ಇದರಲ್ಲಿ ಈಕೆ ನವನಟ ಧನಂಜಯ್ ಅವರ ಜೊತೆ ಅಭಿನಯಿಸುತ್ತಿದ್ದಾಳೆ.  
 
ಈ ಚಿತ್ರದ ಶೂಟಿಂಗ್ ಅಕ್ಟೋಬರ್ ತಿಂಗಳಿನಿಂದ ಆರಂಭ ಆಗಲಿದೆ ಎಂದು ಚಿತ್ರತಂಡದಿಂದ ಮಾಹಿತಿ ಬಂದಿದೆ. ಮುಖ್ಯವಾಗಿ ಈ ಚಿತ್ರವು 12  ನೇ ಶತಮಾನದ ಕಥಾ ಹಂದರ ಹೊಂದಿದ್ದು, ಈವರೆಗೂ ಗ್ಲಾಮಿಯಾಗಿದ್ದ ಮೇಘನ ಇದರಲ್ಲಿ  ಐತಿಹಾಸಿಕ ಪಾತ್ರದಲ್ಲಿ ಮಿಂಚಲು ಹೊರಟಿದ್ದಾಳೆ. 
 
 ಈ ಚಿತ್ರವು ಮುಂದಿನ ವರ್ಷ  ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಹೇರಳವಾಗಿದೆ. ರಾಟೆ ಮತ್ತು ಬಾಕ್ಸರ್ ಚಿತ್ರಗಳ ಪ್ರಾಜೆಕ್ಟ್ ಈಗ ಧನಂಜಯ್ ಪೂರ್ಣ ಮಾಡ ಬೇಕಿದೆ. ಬಹುಪರಾಕ್ ಮೂಲಕ ಹಿನ್ನಲೆ ಗಾಯಕಿ ಆದ ಮೇಘನ ಪ್ರತಿಭೆಯನ್ನು ಅಲ್ಲಮದಲ್ಲಿ ನಾಗಾಭರಣ ಯಾವ ರೀತಿ ಬಳಲ್ಸಿ ಕೊಳ್ತಾರೋ ವೇಟ್ ಅಂಡ್ ವಾಚ್. 

ವೆಬ್ದುನಿಯಾವನ್ನು ಓದಿ