ಅಕ್ಕಿನೇನಿ ನಾಗಾರ್ಜುನ್ ಅವರು ತಮ್ಮ ಹಿರಿಯ ಮಗ ನಾಗ ಚೈತನ್ಯ ಚಿತ್ರದ ನಿರ್ಮಾಣದಲ್ಲಿ ಪ್ರಾಮುಖ್ಯತೆ ನೀಡಿರುವಂತೆ ಕಿರಿಯ ಮಗ ಅಕ್ಕಿನೇನಿ ಅಖಿಲ್ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ ನಾಯಕರಾಗಿ ಮಾಡುವತ್ತ ಹೆಚ್ಚಿನ ಗಮನ ನೀಡಿದ್ದಾರೆ. ಈ ಚಿತ್ರದ ನಿರ್ದೇಶನ ಮಾಡಲು ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ ಎನ್ನುವ ಸುದ್ದಿ ಈಗ ತಿಳಿದು ಬಂದಿದೆ. ಇದನ್ನು ನಿರ್ದೇಶಿಸುತ್ತಿರುವವರು ಬೇರೆ ಯಾರು ಅಲ್ಲ ಅಲ್ಲಡು ಶೀನು ಚಿತ್ರದ ನಿರ್ದೇಶಕ ವಿ ವಿನಾಯಕ್.ಬೆಲ್ಲಕೊಂಡಂ ಸುರೇಶ್ ಅವರ ಪುತ್ರ ಬೆಲ್ಲಕೊಂಡಂ ಶ್ರೀನಿವಾಸ್ ಚಿತ್ರವನ್ನು ನಿರ್ದೇಶಿಸಿ , ಆ ಸಿನಿಮಾಕ್ಕೆ ಯಶಸ್ಸು ನೀಡುವಂತೆ ಮಾಡಿದ ವಿನಾಯಕ್ ಅಖಿಲ್ ಹೊಸ ಚಿತ್ರವನ್ನು ನಿರ್ದೇಶಿಸುತ್ತಾರೆ ಎನ್ನುವ ಸುದ್ದಿ ಈಗ ಟಾಲಿವುಡ್ ನಗರ ವಾಸಿಗಳಲ್ಲಿ ಹರಿದಾಡುತ್ತಿದೆ.
ಸೆಪ್ಟೆಂಬರ್ 20 ರಂದು ಅನ್ನಪೂರ್ಣ ಸ್ಟುಡಿಯೋ ದಲ್ಲಿ ಈ ಚಿತ್ರವೂ ಅದ್ಧೂರಿಯಿಂದ ಲಾಂಚ್ ಆಗುತ್ತದೆ ಎನ್ನುವ ಸುದ್ದಿ ಹರಡಿದೆ. ನಾಗಾರ್ಜುನ್ ಮತ್ತು ಅಮಲ ಅವರ ಪುತ್ರ ಅಖಿಲ್ ಈಗಾಗಲೇ ಮನಂ ಚಿತ್ರದಲ್ಲಿ ತಮ್ಮ ಅಭಿನಯ ತೋರಿದ್ದಾರೆ. ಆತ ತೆರೆಯಮೇಲೆ ಬಂದ ರೀತಿ ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ ಇಡಿ ಚಿತ್ರರಂಗವನ್ನು ಆಕರ್ಷಿಸಿದೆ. ಈ ಎಲ್ಲ ಕಾರಣದಿಂದ ನಾಗ್ ತಮ್ಮ ಮಗನ ಚಿತ್ರದ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಖಿಲ್ ಗೆ ಉತ್ತಮ ಭವಿಷ್ಯ ಇದೆ ಎಂದು ಈ ಹೇಳಿ ಈ ಮೂಲಕ ತಮ್ಮ ಮೆಚ್ಚುಗೆ ತೋರಿಸಿದ್ದಾರೆ .