ನಾಗರ್ಜುನ್ ಎರಡನೇ ಮಗ ಅಖಿಲ್ ತೆರಂಗೇಟ್ರಂ ಗೆ ಸಿದ್ಧತೆ ..ನಿಕ್ಕಿಯಾದ ನಿರ್ದೇಶಕ

ಸೋಮವಾರ, 1 ಸೆಪ್ಟಂಬರ್ 2014 (09:17 IST)
ಅಕ್ಕಿನೇನಿ ನಾಗಾರ್ಜುನ್ ಅವರು ತಮ್ಮ ಹಿರಿಯ ಮಗ ನಾಗ ಚೈತನ್ಯ  ಚಿತ್ರದ ನಿರ್ಮಾಣದಲ್ಲಿ ಪ್ರಾಮುಖ್ಯತೆ ನೀಡಿರುವಂತೆ ಕಿರಿಯ ಮಗ ಅಕ್ಕಿನೇನಿ ಅಖಿಲ್ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ  ನಾಯಕರಾಗಿ ಮಾಡುವತ್ತ ಹೆಚ್ಚಿನ ಗಮನ ನೀಡಿದ್ದಾರೆ. ಈ ಚಿತ್ರದ ನಿರ್ದೇಶನ ಮಾಡಲು ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ ಎನ್ನುವ ಸುದ್ದಿ ಈಗ ತಿಳಿದು ಬಂದಿದೆ. ಇದನ್ನು ನಿರ್ದೇಶಿಸುತ್ತಿರುವವರು ಬೇರೆ ಯಾರು ಅಲ್ಲ ಅಲ್ಲಡು ಶೀನು ಚಿತ್ರದ ನಿರ್ದೇಶಕ ವಿ ವಿನಾಯಕ್.ಬೆಲ್ಲಕೊಂಡಂ ಸುರೇಶ್ ಅವರ ಪುತ್ರ  ಬೆಲ್ಲಕೊಂಡಂ  ಶ್ರೀನಿವಾಸ್  ಚಿತ್ರವನ್ನು ನಿರ್ದೇಶಿಸಿ , ಆ ಸಿನಿಮಾಕ್ಕೆ ಯಶಸ್ಸು ನೀಡುವಂತೆ ಮಾಡಿದ ವಿನಾಯಕ್  ಅಖಿಲ್ ಹೊಸ ಚಿತ್ರವನ್ನು ನಿರ್ದೇಶಿಸುತ್ತಾರೆ ಎನ್ನುವ ಸುದ್ದಿ ಈಗ ಟಾಲಿವುಡ್ ನಗರ ವಾಸಿಗಳಲ್ಲಿ  ಹರಿದಾಡುತ್ತಿದೆ. 
 
ಸೆಪ್ಟೆಂಬರ್  20  ರಂದು ಅನ್ನಪೂರ್ಣ   ಸ್ಟುಡಿಯೋ ದಲ್ಲಿ ಈ ಚಿತ್ರವೂ ಅದ್ಧೂರಿಯಿಂದ ಲಾಂಚ್ ಆಗುತ್ತದೆ ಎನ್ನುವ ಸುದ್ದಿ ಹರಡಿದೆ. ನಾಗಾರ್ಜುನ್ ಮತ್ತು ಅಮಲ ಅವರ ಪುತ್ರ ಅಖಿಲ್ ಈಗಾಗಲೇ ಮನಂ ಚಿತ್ರದಲ್ಲಿ ತಮ್ಮ ಅಭಿನಯ ತೋರಿದ್ದಾರೆ. ಆತ ತೆರೆಯಮೇಲೆ ಬಂದ ರೀತಿ ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ ಇಡಿ ಚಿತ್ರರಂಗವನ್ನು ಆಕರ್ಷಿಸಿದೆ. ಈ ಎಲ್ಲ ಕಾರಣದಿಂದ ನಾಗ್ ತಮ್ಮ ಮಗನ ಚಿತ್ರದ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು  ಅಖಿಲ್ ಗೆ ಉತ್ತಮ ಭವಿಷ್ಯ ಇದೆ ಎಂದು ಈ ಹೇಳಿ ಈ ಮೂಲಕ ತಮ್ಮ ಮೆಚ್ಚುಗೆ ತೋರಿಸಿದ್ದಾರೆ  .
 
ಅಖಿಲ್ ತಾನು ಹೀರೋ ಆಗಲು ಯಾವ ರೀತಿಯ ಅಂಶಗಳು ಇರಬೇಕು ಎಂದು ಟ್ವೀಟ್ ಮಾಡಿ  ಕೇಳಿದಾಗ ಒಂದಷ್ಟು ಮಂದಿ  ಪ್ರಣಯಾಧಾರಿತ ಕಥೆಯ ಚಿತ್ರಗಳಲ್ಲಿ ನಟಿಸುವಂತೆ ಹೇಳಿದರೆ ಒಂದಷ್ಟು ಜನರು ಆಕ್ಷನ್ ಚಿತ್ರಗಳಲ್ಲಿ ನಟಿಸುವಂತೆ   ಹೇಳಿದ್ದಾರೆ. 
ಈಗ ಅಖಿಲ್ ಎರಡು ಮೂರು ಕಥೆಗಳನ್ನು ಆಯ್ಕೆ ಮಾಡಿಕೊಂಡು ವಿನಾಯ್ ಬಳಿ ಕುಳಿತು ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿಕೊಂದರಣೆ.ಒಟ್ಟಾರೆ ನಾಗ್ ಅವರ ಎರಡನೇ ಮಗ ಸಹ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ.. ಅವರಿಗೆ ಒಳ್ಳೆಯದಾಗಲಿ. ಗುಡ್ಲಕ್ !

ವೆಬ್ದುನಿಯಾವನ್ನು ಓದಿ