ಕನ್ನಡ ಚಿತ್ರರಂಗದ ಅಪರೂಪದ ಮುದ್ದಾದ ನಟಿ ಅನು ಪ್ರಭಾಕರ್. ಆಕೆಯ ವೈವಾಹಿಕ ಬದುಕಲ್ಲಿ ಆದ ಏರುಪೇರಿನಿಂದ ವಿಚ್ಛೇದನ ಪಡೆದರು. ಹಿರಿಯನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಅವರನ್ನು ಮದುವೆ ಆಗಿದ್ದ ಅನು ಬದುಕಲ್ಲಿ ಪತಿ ಉತ್ತಮ ಸಂಗಾತಿ ಆಗದೆ ಹೋದದ್ದು ವಿಷಾದ. ಹಿರಿಯನಟಿ ಮತ್ತು ಅನು ಅತ್ತೆ ಜಯಂತಿ ಹಾಗೂ ಅನು ನಡುವಿನ ಬಾಂಧವ್ಯ ಎಷ್ಟೇ ಉತ್ತಮವಾಗಿದ್ದರೂ ಸಹಿತ ಆಕೆಯ ಪತಿಯ ಜೊತೆಗಿನ ಬಾಂದವ್ಯ ಉತ್ತಮವಾಗಿಲ್ಲದೆ ಇದ್ದ ಕಾರಣ ತನ್ನ ವೈವಾಹಿಕ ಬದುಕಿಗೆ ಸೋಡಾ ಚೀಟಿ ನೀಡುವ ಪರಿಸ್ಥಿತಿ ಉಂಟಾಯಿತು.
ಆದರೆ ಈಗ ಅನು ಮತ್ತೊಮ್ಮೆ ತನ್ನ ತಾರ ಬದುಕನ್ನು ಆರಂಭ ಮಾಡಿದ್ದಾರೆ ಹೊಸತನದಿಂದ . ಫೇರ್ ಅಂಡ್ ಲವ್ಲಿ ಚಿತ್ರದಲ್ಲಿ ನಟಿಸುವುದರ ಮೂಲಕ ಆಕೆ ತನ್ನ ಹೊಸ ಬದುಕು ಪ್ರಾರಂಭ ಮಾಡಿರುವ ಸಂಗತಿ ಆಕೆಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಪ್ರೇಂ ಕುಮಾರ್ ಮತ್ತು ಶ್ವೇತ ಶ್ರೀವತ್ಸ ನಟನೆಯ ಚಿತ್ರದ ಮೂಲಕ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನು ಪ್ರಭಾಕರ್ ತಾರ ಬದುಕು ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಉಜ್ವಲವಾಗಲಿ ಎನ್ನುವ ಹಾರೈಕೆ ನಮ್ಮದು.