ಆಕ್ಷನ್ ಚಿತ್ರ ಅರ್ಜುನ್ ಸರ್ಜಾ ಅಭಿಮನ್ಯು ಅಕ್ಟೋಬರ್ ನಲ್ಲಿ ತೆರೆಗೆ..

ಗುರುವಾರ, 18 ಸೆಪ್ಟಂಬರ್ 2014 (10:23 IST)
ಕನ್ನಡದ ಹಿರಿಯ ಖಳ- ನಾಯಕ ನಟರಾಗಿದ್ದ ಶಕ್ತಿ ಪ್ರಸಾದ್ ಅವರ ಪುತ್ರ ಅರ್ಜುನ್ ಸರ್ಜಾ  ಬೆಳೆದು ಹೊಳೆದದ್ದು ನೆರೆಯ ಟಾಲಿವುಡ್ ಮತ್ತು ಕಾಲಿವುಡ್ ಚಿತ್ರರಂಗಗಳಲ್ಲಿ . ಅವರು ತಮ್ಮ ಅದೃಷ್ಟ ಪರೀಕ್ಷೆ ಕನ್ನಡದಲ್ಲೂ  ಮಾಡಿದರೂ ಕನ್ನಡಿಗರು ಬೇರೆ ಭಾಷಿಗರಿಗೆ ಹಾಕುವಂತೆ ಕನ್ನಡ ಪ್ರತಿಭೆಗೆ ಆದ್ಯತೆ ನೀಡಲಿಲ್ಲ. ಅವೆಲ್ಲ  ಹಳೆ ಕಥೆ ಈಗ ಅರ್ಜುನ್ ಸರ್ಜಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿ ನಿರ್ಮಿಸಿರುವ  ಶ್ರೀರಾಂ ಫಿಲ್ಮ್ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ  ಅಭಿಮನ್ಯು ಚಿತ್ರ  ನಿರ್ಮಾಣವಾಗಿದೆ. ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ ಮಾಡಿರುವ  ಅಕ್ಟೋಬರ್‌ನಲ್ಲಿ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 
 
ಚಿತ್ರಕ್ಕೆ ಬೆಂಗಳೂರು ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಕೆ.ಕೆ ಸಂಕಲನ,ಶಶಿಧರ್ ಅಡಪ ಕಲಾನಿರ್ದೇಶನ, ರಾಜುಸುಂದರಂ ನೃತ್ಯ ನಿರ್ದೇಶನ ಹಾಗೂ ಶಿವಾರ್ಜುನ್‌ರ ನಿರ್ಮಾಣ ನಿರ್ವಹಣೆ ಹೊಂದಿರುವ ಅಭಿಮನ್ಯು  ಆಕ್ಷನ್ ಪ್ರಿಯರಿಗೆ ನಿಶ್ಚಿತವಾಗಿ ರಸದೌತಣ ನೀಡುತ್ತದೆ. ಅರ್ಜುನ್ ಸರ್ಜಾ ಜೊತೆಗೆ ಸುರ್ವಿನ್ ಚಾವ್ಲಾ,ರವಿಕಾಳೆ,ಸಿಮ್ರಾನ್ ಕಪೂರ್,ರಾಹುಲ್ ದೇವ್ ಮುಂತಾದವರು ನಟಿಸಿದ್ದಾರೆ. ಕನ್ನಡಿಗರು ಈ ನಟನ ಸಾಹಸ ಹರಸಿ ಹಾರೈಸಿ ಗೆಲ್ಲಿಸಲಿ ಎನ್ನುವ ಸದಾಶಯ ನಮ್ಮದು!

ವೆಬ್ದುನಿಯಾವನ್ನು ಓದಿ