ನಿಖಿಲ್ ಗೌಡ ತೆರಗೇಟ್ರಂಗೆ ಮುಹೂರ್ತ.. ಅದ್ಧೂರಿ ಚಿತ್ರದ ನಿರ್ಮಾಣದತ್ತ ಕುಮಾರ ಸ್ವಾಮಿ

ಗುರುವಾರ, 18 ಸೆಪ್ಟಂಬರ್ 2014 (10:24 IST)
ಅನಿತಾ ಕುಮಾರ್ ಸ್ವಾಮಿ ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ಅವರು ಈಗ ಹೆಚ್ಚು ಗಮನ ಸೆಳೆದಿರುವುದು ತಮ್ಮ ಮಗ ನಿಖಿಲ್ ಗೌಡ ಸಿನಿಮಾ ನಿರ್ಮಾಣದ ಮೂಲಕ. ಹೆಚ್. ಡಿ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರ ಸ್ವಾಮಿ ದಂಪತಿಗಳ ಮಗ ನಿಖಿಲ್ ಗೌಡ ಚಿತ್ರದಲ್ಲಿ ನಟಿಸುವ ಬಗ್ಗೆ ಸಾಕಷ್ಟು ಸುದ್ದಿ ಇತ್ತು. ಆದರೆ ಯಾವುದು ಸ್ಪಷ್ಟವಾದ ರೂಪ ಪಡೆದಿರಲಿಲ್ಲ. ಮಾಜಿ ಪ್ರಧಾನ ಮಂತ್ರಿ ಮತ್ತು ಹಾಲಿ ಸಂಸದ  ಹೆಚ್ ಡಿ ದೇವೇಗೌಡ ಅವರ ಮೂರನೇ ಮಗ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ. ರಾಜಕೀಯ ಬದುಕಿನ ಜೊತೆಗೆ ಈ ದಂಪತಿಗಳು ತಮ್ಮ ಗಮನ ನೆಟ್ಟಿದ್ದು ಸಿನಿಮಾ ನಿರ್ಮಾಣ ಮಾಡುವತ್ತ. ಇವರ ಪ್ರೊಡಕ್ಷನ್ ನಲ್ಲಿ ಸಿದ್ಧವಾದ ಚಂದ್ರ ಚಕೋರಿ ವರ್ಷವಿಡಿ ಚಿತ್ರಮಂದಿರದಲ್ಲಿದ್ದು ಜನರನ್ನು ಮನರಂಜಿಸಿತ್ತು. ಅನೇಕ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡಿರುವ ಅನಿತಾ ಕುಮಾರ ಸ್ವಾಮಿ ದಂಪತಿಗಳು ಈಗ ತಮ್ಮ ಮಗನ ಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ. ಈವರೆಗೂ ಯಾರೂ ಮಾಡಿರದೆ ಇರುವಷ್ಟು ಅದ್ಧೂರಿಯಾಗಿ ಮುಹೂರ್ತ ಮತ್ತು ಚಿತ್ರದ ನಿರ್ಮಾಣ ಮಾಡುವ ಬಗ್ಗೆ ಖುದ್ದು ಪಪ್ಪಾ ಕುಮಾರಸ್ವಾಮಿ ಹೇಳಿದ್ದಾರೆ. 
 
ಸಿನಿಮಾದಲ್ಲಿ ಬರುವ ಮುನ್ನ ನಿಖಿಲ್ ಗೆ ಆಕ್ಷನ್, ಡ್ರಾಮ, ಡ್ಯಾನ್ಸ್ ಎಲ್ಲವನ್ನು ಕಲಿಸಲಾಗಿದೆಯಂತೆ. ಅಷ್ಟೇ ಅಲ್ಲದೆ ಈಗ ನಿರ್ಮಿಸುವ ಚಿತ್ರ ಟಾಲಿವುಡ್ ಅಥ್ವಾ ಬಾಲಿವುಡ್ ರೀಮೇಕ್ ಆಗಿರುತ್ತದೆ ಎನ್ನುವ ಸಂಗತಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಮೂಲಕ ನಿಖಿಲ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಆಗಿರುವುದು ಪಕ್ಕಾ ಆಗಿದೆ. ಆದರೆ ಗಾಂಧೀನಗರದಲ್ಲಿ ಮಾತ್ರ ಅನಿತಕ್ಕ ರಾಧಿಕಕ್ಕನ ಮೇಲೆ ಸರಿಯಾಗಿ ಸೇಡು ತೀರಿಸಿಕೊಳ್ಳಲು ಸಿದ್ಧ ಆಗಿದ್ದಾರೆ ಎನ್ನುವ ಗುಸುಗುಸು ಶುರು ಆಗಿದೆ. ಸದಾ ಇಲ್ಲದ ಸಲ್ಲದ ಸುದ್ದಿ ಹರಡಿ ಮಾಧ್ಯಮಗಳಲ್ಲಿ ಫೋನ್ ಮೂಲಕ ಇಲ್ಲ ನಮ್ಮ ಯಜಮಾನರು ಒಳ್ಳೆಯವರು , ನಾವು ಅವರು ಚೆನ್ನಾಗಿದ್ದೇವೆ ಎಂದು ಹೇಳುವ ರಾಧಿಕಾಗೆ ಮಾತ್ರ ಈ ಸುದ್ದಿ ಯಾವ ರೀತಿ ಶಾಕ್ ನೀಡಿದೆ ಎನ್ನುವುದೇ ಎಲ್ಲರ ಮನದಲ್ಲಿ ಉಳಿದಿರುವ ಸಂಗತಿಯಾಗಿದೆ. 

ವೆಬ್ದುನಿಯಾವನ್ನು ಓದಿ