ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅಣ್ಣತಮ್ಮಂದಿರು. ಅದಕ್ಕಿಂತಲೂ ಮುಖ್ಯವಾದ ಸಂಗತಿ ಅವರಿಬ್ಬರೂ ಬೆಳೀತಾ ದಾಯಾದಿಗಳು ಸಹಿತ ಆಗಿದ್ದಾರೆ. ಆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರು ಮೀಡಿಯ ಮುಂದೆ ಎಷ್ಟೇ ನಾಟಕ ಆಡಿದರು ಅವರ ಬಾಂಧವ್ಯ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ ಎನ್ನುವ ಸಂಗತಿ ಎಲ್ಲರಿಗು ಗೊತ್ತೇ ಇದೆ. ಗೋವಿಂದುಡು ಅಂದರಿ ವಾಡೆಲೋ ಚಿತ್ರದ ಆಡಿಯೋ ಫಂಕ್ಷನ್ ನಲ್ಲಿ ಚಿರಂಜೀವಿ ಅತ್ಯಂತ ಬುದ್ಧಿವಂತಿಕೆಯಿಂದ ಪವನ್ ಕಲ್ಯಾಣ್ 150 ನೇ ದಿನದ ಸಮಾರಂಭಕ್ಕೆ ಬರ್ತಾರೆ ಎನ್ನುವ ಮಾತನ್ನು ಜನರ ಮುಂದೆ ತಿಳಿಸಿದರು. ಆದರೆ ಈ ಡೈಲಾಗ್ ಗೋವಿಂದುಡು... ಚಿತ್ರಕ್ಕೆ ಸೇರಿದ್ದು ಎನ್ನುವ ಮಾತನ್ನು ವಿಮರ್ಶಕರು ಆಡಿದ್ದಾರೆ.
ಅವಿಭಕ್ತ ಕುಟುಂಬದಲ್ಲಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಉಂಟಾದರೂ ಸಹಿತ ವ್ಯಕ್ತಿಗಳ ಮೇಲಣ ಪ್ರೀತಿ ಎಂದಿಗೂ ಕಡಿಮೆ ಆಗಲ್ಲ ಎನ್ನುವ ಅಂಶದ ಅಡಿಯಲ್ಲಿ ತಯಾರಾಗಿರುವ ಗೋವಿಂದುಡು... ಚಿತ್ರದಲ್ಲಿ ರಾಮ್ ಚರಣ್ ಲಂಡನ್ನಿಂದ ಬಂದು ಕುಟುಂಬ ಒಂದು ಮಾಡುವ ನಾಯಕ. ಆ ಅಂಶವನ್ನೇ ಮುಂದಿಟ್ಟುಕೊಂಡು ಈಗ ಭಿನ್ನಾಭಿಪ್ರಾಯ ಎದುರಿಸುತ್ತಿರುವ ತನ್ನ ಮತ್ತು ತನ್ನ ತಮ್ಮನ ನಡುವೆ ಬಾಂಧವ್ಯದಲ್ಲಿನ ಭೇದ ದೂರವಾಗಿ ಈ ಚಿತ್ರದ 150 ನೇ ದಿನದ ಕಾರ್ಯಕ್ರಮ ಒಟ್ಟು ಮಾಡುತ್ತದೆ ಎನ್ನುವ ಭಾವ ವ್ಯಕ್ತ ಪಡಿಸಿದ್ದಾರೆ. ಈ ಚಿತ್ರ ಇಂದು ಬಿಡುಗಡೆ ಆಗಲಿದೆ. ಚಿರಂಜೀವಿ ನೆನೆದಂತೆ ನಡೆಯಲಿ.