ಶ್ರುತಿ ಮನೆಕೆಲಸದಾಕೆಯ ಪ್ರಕರಣಕ್ಕೆ ಹೊಸ ತಿರುವು ...

ಸೋಮವಾರ, 22 ಸೆಪ್ಟಂಬರ್ 2014 (11:26 IST)
ತನ್ನ ಪಾಡಿಗೆ ತಾನು ಇದ್ದರೂ ಬೇಡದ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಗಿದೆ ನಟಿ ಶ್ರುತಿ ಅವರಿಗೆ. ತಮ್ಮ ಅಭಿನಯದ ಮೂಲಕ ಮನ ಗೆದ್ದು ಸುದ್ದಿ  ಆಗಿದ್ದ ಶ್ರುತಿ ತಮ್ಮ ರಿಯಲ್ ಬದುಕಿನಿಂದಲೂ ಸಹಿತ ಸಾಕಷ್ಟು ಸುದ್ದಿ ಆದರು. ಆಕೆಯ ಮನೆ ಕೆಲಸದಾಕೆಯೇ ಶ್ರುತಿ ಬಗ್ಗೆ ಇಲ್ಲಸಲ್ಲದ್ದು ಹೇಳಿ  ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗ ಈ ಬಗ್ಗೆ ಮನೆ ಕೆಲಸದಾಕೆ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ನಟಿ ಶೃತಿ ನಗರದ 5ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಬೇರೆಯವರ ಮಾತುಕೇಳಿ ತನ್ನ ಬಗ್ಗೆ ಬೇಡದ ಅಪವಾದ ಮಾಡಿರುವ ಮನೆಕೆಲಸದಾಕೆ ಈ ಮುಖಾಂತರ ಸಮಾಜದಲ್ಲಿ ತನ್ನ ಬಗ್ಗೆ ಕೆಟ್ಟ ಹೆಸರನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ  ಎನ್ನುವ ಸಂಗತಿಯನ್ನು ನ್ಯಾಯಾಲಯದ ಮುಂದೆ ಹೇಳಿ ತನಗೆ  ನ್ಯಾಯ ದೊರಕಿಸಿಕೊಡ ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
 
ಶ್ರುತಿ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. ನಟಿ ಶ್ರುತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮನೆಕೆಲಸದಾಕೆ ಶೋಭಾ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಶ್ರುತಿ ತಮ್ಮ ಬಗ್ಗೆ ಹರಡಿರುವ ಸುದ್ದಿಗೆ ಬೇಸತ್ತು ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. 

ವೆಬ್ದುನಿಯಾವನ್ನು ಓದಿ