ತ್ರಿವಿಕ್ರಮ್ ಚಿತ್ರದಿಂದ ಪ್ರಣೀತಾಗೆ ಕೊಕ್ ನಿತ್ಯಾಗೆ ಲಕ್

ಗುರುವಾರ, 23 ಅಕ್ಟೋಬರ್ 2014 (11:40 IST)
ಕನ್ನಡ ಹುಡುಗಿ ಪ್ರಣೀತ.  ವೈದ್ಯರ ಕುಟುಂಬ ಕುಡಿ ಆಗಿರುವ ಈ ಚೆಲುವೆ ಆಯ್ಕೆ ಮಾಡಿಕೊಂಡಿದ್ದು ಸಿನಿಮಾ ರಂಗವನ್ನು. ಸ್ಯಾಂಡಲ್ ವುಡ್ ನಲ್ಲಿ ತನ್ನ ಕೆರಿಯರ್ ಆರಂಭ ಮಾಡಿದ ಪ್ರಣೀತ ಆ ಬಳಿಕ  ಗಮನ ನೀಡಿದ್ದು ಟಾಲಿವುಡ್ ಕಡೆಗೆ. ಅಲ್ಲಿ ಆಕೆಗೆ ಹೇಳಿಕೊಳ್ಳುವ ಯಶಸ್ಸು ಸಿಗಲೇ ಇಲ್ಲ. ಆದರೂ ಆಕೆ ತನ್ನ ಪ್ರಯತ್ನ ನಿಲ್ಲಿಸಲಿಲ್ಲ. ಆಕೆಯ ತಾರ ಬದುಕಿಗೆ ತಿರುವು ನೀಡಿದ್ದು ಪವನ್ ಕಲ್ಯಾಣ‍್ ಜೊತೆಯಲ್ಲಿ ನಟಿಸಿದ ಅತ್ತಾರಿಂಟಿಕಿ ದಾರೇದಿ.ಇದರಿಂದ ಆಕೆಯ ಬದುಕನ್ನು ಉಜ್ವಲ ಮಾಡಿದರು ನಿರ್ದೇಶಕ ತ್ರಿವಿಕ್ರಂ. ಅದಾದ ಬಳಿಕ ಜೂನಿಯರ್ ಎನ್ಟಿಆರ್ ಅವರ ಜೊತೆ ನಟಿಸಿದ ರಭಸ ಸೋತು ನೆಲ ಕಚ್ಚಿತು. ಆದರೆ ಈಗ ಬನ್ನಿ ಜೊತೆಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ.

ಈ ಚಿತ್ರವನ್ನು ತ್ರಿವಿಕ್ರಂ ಅವರು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಮೂರು ಹೀರೋಯಿನ್ ಗಳಲ್ಲಿ ಒಬ್ಬಳಾಗಿ ನಟಿಸುವ ಭಾಗ್ಯ ಪಡೆದಿದ್ದಾಳೆ ಈ ಚೆಲುವೆ ಎನ್ನುವ ಸುದ್ದಿ ಹರಡಿತ್ತು.  
ಆದರೆ ಏನಾಯಿತೋ ಏನೋ ಗೊತ್ತಿಲ್ಲ ಈಗ ಪ್ರಣೀತ ಚಾನ್ಸ್ ಮಲೆಯಾಳಂ ಕುಟ್ಟಿ ನಿತ್ಯ ಮೆನನ್ ಪಾಲಾಗಿದೆ. ತ್ರಿವಿಕ್ರಂ ನಿರ್ದೇಶನದ ಚಿತ್ರದಲ್ಲಿ ನಿತ್ಯಾಗೆ ಅವಕಾಶ ಸಿಕ್ಕಿದೆ ಎನ್ನುವ ಸುದ್ದಿ ಹೊರ ಬಂದಿದೆ. ಈ ರೀತಿಯ ಅನಿರೀಕ್ಷಿತ ಬೆಳವಣಿಗೆ ರಾಜಕೀಯ ಮತ್ತು ಚಿತ್ರರಂಗದಲ್ಲಿ ಸಾಮಾನ್ಯ ಸಂಗತಿ. ಆದರೆ ಪಾಪ ಪ್ರಣೀತಾಗೆ ಹೀಗೆ ಆಗ ಬಾರದಿತ್ತು ಎನ್ನುತ್ತಿದ್ದಾರೆ ಆಕೆಯ ಅಭಿಮಾನಿಗಳು.

ಗುಂಡೆ ಜಾರಿ ಗಲ್ಲಂತಯ್ಯಿಂದಿ  ನಂತರ ಟಾಲಿವುಡ್ ಮುಖ ದರ್ಶನ ಮಾಡದ ಈ ಚೆಲುವೆ ಮಳ್ಳಿ ಮಳ್ಳಿ  ಇದಿ ರಾಣಿ ರಾಜು ಮತ್ತು ರುದ್ರಮದೇವಿ ಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.ಈಗ ನಿತ್ಯಾಗೆ ತ್ರಿವಿಕ್ರಂ ನಿರ್ದೇಶನದಲ್ಲಿ ನಟಿಸುವ ಸೌಭಾಗ್ಯ. ಅಲ್ಲದೆ ಮಮ್ಮುಟ್ಟಿ ಪುತ್ರ ಸಲ್ಮಾನ್ ಜೊತೆ ಮಣಿರತ್ನಂ ನಿರ್ದೇಶನದ ಚಿತ್ರದಲ್ಲೂ ಸಹ ನಟಿಸುವ ಅವಕಾಶ ಹೊಂದಿದ್ದಾಳೆ ನಿತ್ಯ. ಈಗ ತ್ರಿವಿಕ್ರಂ ಅವರ ನಿರ್ದೇಶನದ ಚಿತ್ರದಲ್ಲಿ ಸಮಂತ, ಅದಾ ಶರ್ಮ ಜೊತೆಯಲ್ಲಿ ಮೂರನೇ ಹೀರೋಯಿನ್ ಆಗುವ ಚಾನ್ಸ್ ಪಡೆದಿದ್ದಾಳೆ ಈ ಚೆಲುವೆ.

ವೆಬ್ದುನಿಯಾವನ್ನು ಓದಿ