ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಎನ್ನುವ ಬಿರುದು ದೊರೆತಿರುವುದು ಚಿರಂಜೀವಿ ಸರ್ಜಾಗೆ. ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದರು ಸಹಿತ ಎಲ್ಲರ ಗಮನ ಸೆಳೆದಿರುವ ನಟ ಈತ. ಈಗ ಚಿರು ರಾಜಾಹುಲಿ ಫೇಮ್ ನಿರ್ದೇಶಕ ಗುರು ದೇಶಪಾಂಡೆ ಅವರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹೆಸರು ರುದ್ರ ತಾಂಡವ. ಅದಲ್ಲದೆ ಇತ್ತೀಚೆಗೆ ಚಿರು ಹುಟ್ಟಿದ ಹಬ್ಬ ನಡೆಯಿತು. ಅಂದು ಸಹ ಅವರು ತಮ್ಮ ಹೊಸ ಚಿತ್ರಕ್ಕೆ ಸಹಿ ಹಾಕಿದರು.
ಚಿರು ನಟಿಸುತ್ತಿರುವ ಹೊಚ್ಚ ಹೊಸ ಚಿತ್ರದ ಹೆಸರು ಸೀಜರ್ . ಇದು ಜೂಲಿಯಸ್ ಸೀಜರ್ ಕಥೆಯನ್ನು ಹೊಂದಿಲ್ಲ. ಸಂಪೂರ್ಣವಾಗಿ ಬೇರೆ ಕಥೆಯನ್ನು ಒಳಗೊಂಡ ಚಿತ್ರವಾಗಿದೆ. ಶ್ರೀ ಕದ್ರಿ ಲಕ್ಷ್ಮಿ ನರಸಿಂಹ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಚಿತ್ರವನ್ನು ವಿನಯ್ ಕೃಷ್ಣ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ ನಿರ್ಮಾಪಕ ವಿನಯ್ ಕೃಷ್ಣ.