ಮತ್ತೆ ಕಣ್ಣಿಗೆ ಕಂಡ ರಮ್ಯಾ: ಕನ್ನಡ ಚಿತ್ರರಂಗದಿಂದ ಕಾಣೆಯಾಗಿದ್ದ ಗಿಣಿಮರಿ ಇಲ್ಲಿ ಲಭ್ಯ!

ಸೋಮವಾರ, 10 ನವೆಂಬರ್ 2014 (12:42 IST)
ಡಾ.ಶಿವರಾಜ್ ಕುಮಾರ್ ಅವರ ಜೊತೆ ಆರ್ಯನ್ ಚಿತ್ರ ನಟಿಸಿದ್ದ  ರಮ್ಯ ನಟನೆಯ ಕೊನೆಯ ಸಿನಿಮಾ. ಅದಕ್ಕೆ ಮುನ್ನ ದೇಶ ರಾಜಕಾರಣದ ಭಾಗವಾಗಲೆಂದು ಎಲೆಕ್ಷನ್‌ನಲ್ಲಿ ನಿಂತಿದ್ದ ಈಕೆಗೆ ಸೋಲನ್ನು ನೀಡಿ ಮನೆಗೆ ಕಳುಹಿಸಿದರು ಮಂಡ್ಯ ಜನ. ಆದರೆ ಆಕೆ ಅದರ ಬಗ್ಗೆ ಕೆಂಡಾಮಂಡಲ ಆಗಿದ್ದಲ್ಲದೆ ತನ್ನ ಸೋಲಿಗೆ ಅಂಬರೀಶ್ ಅವರೇ  ಕಾರಣ ಎಂದು ಗೂಬೆ ಕೂರಿಸಿ, ಅವರ ಅಭಿಮಾನಿಗಳ ಕೆಂಗಣ್ಣಿಗೆ ಬಿದ್ದಿದ್ದು ಸಹಿತ ಹಳೆಯ ಕಥೆ ಎಂದೇ ಹೇಳ ಬಹುದು.

ಆದರೆ ಇತ್ತೀಚಿಗೆ ರಮ್ಯ ಸುದ್ದಿ ಇಲ್ಲ. ಆಕೆ ಈಗ ವಿದೇಶದಲ್ಲಿ ವಿದ್ಯಾಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಅಂತ ಸುದ್ದಿ ಇದ್ದರು ಅದರ ಬಗ್ಗೆ ಯಾವುದೇ ರೀತಿಯ ನಿಖರತೆ ಇಲ್ಲ ಎಂದೇ ಹೇಳ ಬಹುದು. ಒಟ್ಟಾರೆ ಕನ್ನಡ ಚಿತ್ರರಂಗದ ಈ ಗಿಣಿಮರಿ  ಈಗ ಕರ್ನಾಟಕವನ್ನೇ  ಬಿಟ್ಟು ಹಾರಿ ಹೋಗಿದ್ದಾಳೆ. ಸಾಮಾನ್ಯವಾಗಿ ತನ್ನನ್ನು ಸದಾ ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದ ನಟಿ ಅಲ್ಲಿಂದಲೂ ನಾಪತ್ತೆ.

ಆದರೆ ಈಗ ಬಂದಿರುವ ಸುದ್ದಿ ಅಂದರೆ ರಮ್ಯ ಸೋಶಿಯಲ್ ನೆಟ್ ವರ್ಕ್ ಗೆ ಬಂದಿದ್ದಾಳೆ. ಎರಡು ದಿನಗಳ ಹಿಂದೆ ಆಕೆ ತನ್ನ ಟ್ವಿಟ್ಟರ್ ಪೇಜ್ ನಲ್ಲಿ ಮಾತಾಡಿದ್ದಾಳೆ ನ್ಯೂಯಾರ್ಕ್ ನ  ಐ ಆರ್ ಸಿ ಫ್ರೀಡಂ ಅವಾರ್ಡ್   ಡಿನ್ನರ್‌ನಲ್ಲಿ ಭಾಗವಹಿಸಿರುವ ಬಗ್ಗೆ ಬರೆದಿದ್ದಾಳೆ. ಆಕೆಯು ಆ ಕಾರ್ಯಕ್ರಮಕ್ಕೆ ಮಾಜಿ ಬ್ರಿಟಿಷ್ ಎಂಪಿ ಡೇವಿಡ್ ಮಿಲಿಬ್ಯಾಂಡ್  ಆಹ್ವಾನಿಸಿರುವ ಬಗ್ಗೆ ತಿಳಿಸಿದ್ದು, ಅವರೊಂದಿಗೆ ಇರುವ ಫೋಟೋ ಅದರಲ್ಲಿ ಹಾಕಿ ಧನ್ಯವಾದ ಅರ್ಪಿಸಿದ್ದಾಳೆ. ಈ ಮುಖಾಂತರ ರಮ್ಯ ಚಿತ್ರರಂಗಕ್ಕೆ ಅಲ್ಲದೆ ಇದ್ರೂ ಟ್ವಿಟ್ಟರ್ ಪೇಜ್ ಗೆ ಮರಳಲಿರುವುದು ಎಲ್ಲರಲ್ಲೂ ಖುಷಿ ನೀಡಿದೆ. 
 

ವೆಬ್ದುನಿಯಾವನ್ನು ಓದಿ