ಆಕೆ ನಟಿಸಿರುವ ಚಿತ್ರಗಳಾದ ರುದ್ರಮದೇವಿ, ಬಾಹುಬಲಿ ಮತ್ತು ಲಿಂಗಾ ಈಗ ಬಿಡುಗಡೆಯ ಹಾದಿಯಲ್ಲಿದೆ. ರಾಜ ಮನೆತನದ ಕಥೆಯನ್ನು ಹೊಂದಿರುವ ರಾಣಿ ರುದ್ರಮದೇವಿ ಅನುಷ್ಕ ತಾರ ಬದುಕಿನಲ್ಲಿ ಅನೇಕ ತಿರುವುಗಳನ್ನು ನೀಡಿದ್ದು, ಆಕೆಯು ತನ್ನನ್ನು ಸಂಪೂರ್ಣವಾಗಿ ಸಾಹಸದಲ್ಲಿ ತೊಡಗಿಸಿಕೊಳ್ಳಲು ಪ್ರೇರಕವಾಗಿದೆ ಎಂದೇ ಹೇಳ ಬಹುದಾಗಿದೆ. ಕೇವಲ ಹೀರೋಯಿನ್ ಆಗಿರುವುದಕ್ಕೆ ಇಷ್ಟ ಪಡದೆ ತನ್ನ ಪಾತ್ರಕ್ಕೆ ಎಂತಹ ಸಾಹಸ ಅಗತ್ಯ ಇದೆಯೋ ಅವೆಲ್ಲವನ್ನು ಸಹಿತ ಆಕೆ ಸ್ವೀಕರಿಸಿ ಗೆದ್ದಿದ್ದಾಳೆ.
ರುದ್ರಮ ದೇವಿ ಚಿತ್ರದ ಶೂಟಿಂಗ್ ಈಗ ಮುಗಿದಿದೆ. ಈ ಚಿತ್ರಕ್ಕೆಂದು ಅನುಷ್ಕ ಯುದ್ಧ ಯೋಧೆಯಾಗಿ ಕಾಣಿಸಿಕೊಂಡಿದ್ದು, ಅದಕ್ಕೆಂದು ಅನೇಕ ಸಾಹಸ ದೃಶ್ಯಗಳಲ್ಲಿ ಸಹ ಭಾಗವಹಿಸಿದ್ದಾಳೆ. ಇದಕ್ಕೆಂದು ಕತ್ತಿ ಗುರಾಣಿ, ಅಲ್ಲದೆ ಕುದುರೆ ಸವಾರಿಯನ್ನು ಸಹ ಕಲಿತು ಪಾತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಈ ಚೆಲುವೆ.