ನವೆಂಬರ್21ರಿಂದ 23 ತನಕ ನಡೆಯುವ ಡಾ. ರಾಜ್ ಕಪ್ನ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಸರಣಿಯಲ್ಲಿ ಸುದೀಪ್ ಭಾಗವಹಿಸುವಂತೆ ಮನವಿ ಮಾಡಲು 12 ಜನರನ್ನು ಒಳಗೊಂಡ ನಿರ್ಮಾಪಕರ ತಂಡವೊಂದು ಚೆನ್ನೈಗೆ ತೆರಳಿದೆ ಎನ್ನುವ ಸುದ್ದಿ ಈಗ ಗಾಂಧಿನಗರದಲ್ಲಿ ಜೋರಾಗಿ ಓಡಾಡುತ್ತಿದೆ. ರನ್ನ ಚಲನಚಿತ್ರದ ಚಿತ್ರೀಕರಣ ಪೂರೈಸಿ ಸುದೀಪ್, ಚೆನ್ನೈನಲ್ಲಿ ತಮಿಳು ಚಿತ್ರ ವಿಜಯ್ 38 ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.
ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್, ಉಪೇಂದ್ರ, ದುನಿಯಾ ವಿಜಯ್ ಮತ್ತು ಶ್ರೀನಗರ ಕಿಟ್ಟಿ ತಮ್ಮ ತಂಡಗಳ ನಾಯಕರು. ಈ ಸರಣಿಯ ಅಂತಿಮ ಪಂದ್ಯ ಡಿಸೆಂಬರ್ 7ರಂದು ಮಲೇಷಿಯಾದಲ್ಲಿ ನಡೆಯಲಿದೆ. ಈಗಾಗಲೇ 7 ತಂಡಗಳು ಅಂತಿಮಗೊಂಡಿದೆ. ಸುದೀಪ್ ಅವರು ತಮ್ಮ ನಿಗದಿತ ಕಾರ್ಯದಿಂದ ಬಿಡುವು ಮಾಡಿಕೊಂಡು ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುವಂತೆ ಮನವೊಲಿಸುವ ನಿಟ್ಟಿನಲ್ಲಿ ನಿರ್ಮಾಪಕರ ತಂದ ಚೆನ್ನೈನತ್ತ ಹೊರಟಿದೆ. ಸುದೀಪ್ ನಿರ್ಧಾರ ಏನೆಂಬುದು ಇನ್ನು ಸ್ಪಷ್ಟವಾಗಿಲ್ಲ!